ವಿವಾಹಿತ ಮಹಿಳೆ ಫೇಸ್ ಬುಕ್ ಸ್ನೇಹಿತನ ಜೊತೆ ಪರಾರಿ!
ಮೈಸೂರು, ಡಿಸೆಂಬರ್ 18: ವಿವಾಹಿತ ಮಹಿಳೆಯೊಬ್ಬರು ಪತಿಯನ್ನು ಬಿಟ್ಟು ಫೇಸ್ ಮೂಲಕ ಪರಿಚಿತನಾದ ಪ್ರಿಯಕರನ ಜತೆ ಓಡಿ ಹೋಗಿರುವ ಘಟನೆ ನಡೆದಿದೆ. ಪತ್ನಿ ಕಾಣೆಯಾದ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದರು.
ತಿ.ನರಸೀಪುರ ಪಟ್ಟಣದ ಟೀ ಕ್ಯಾಂಟೀನ್ ಮಾಲೀಕ ಎಸ್.ನಟರಾಜು 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ನವೆಂಬರ್ 30 ರಂದು ಪತ್ನಿ ಕಾಣೆಯಾಗಿದ್ದಾಳೆ. ಈ ಕುರಿತು ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಪ್ರೇಮ ಪ್ರಕರಣ; ಯುವತಿ ಆತ್ಮಹತ್ಯೆ, ಪ್ರಿಯಕರನ ಕೊಂದ ಅಣ್ಣಂದಿರು!
ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಟವರ್ ಲೊಕೇಷನ್ ಮೂಲಕ ಗೃಹಿಣಿಯನ್ನು ಪತ್ತೆ ಹಚ್ಚಿದ್ದಾರೆ. ವಿಜಯಪುರದ ಬಸವನ ಬಾಗೇವಾಡಿಯಲ್ಲಿ ಪ್ರಿಯಕರ ರಮೇಶ್ ಜೊತೆ ಆಕೆ ಇರುವುದು ತಿಳಿದುಬಂದಿದೆ.
ಮೈಸೂರು; ಠಾಣೆ ಮೆಟ್ಟಿಲೇರಿದ ಪೊಲೀಸ್ ಅಧಿಕಾರಿಗಳ ಪ್ರೇಮ, ಪ್ರಣಯ!
ಇಬ್ಬರನ್ನು ಪೊಲೀಸರು ತಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ನಡೆಸಿದಾಗ ಫೇಸ್ ಬುಕ್ ಪ್ರೀತಿ ವಿಷಯ ಬಹಿರಂಗವಾಗಿದೆ. ಮಹಿಳೆ ಮತ್ತು ರಮೇಶ್ 4 ವರ್ಷಗಳ ಹಿಂದೆ ಫೇಸ್ ಬುಕ್ ಮೂಲಕ ಪರಿಚಿತರಾಗಿದ್ದರು.
ಫೇಸ್ ಬುಕ್ ಪ್ರೇಮ; ಪ್ರೇಯಸಿ ನೋಡಲು ಪಾಕ್ಗೆ ಹೊರಟವ ಬಂಧನ
ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಅಂತಿಮವಾಗಿ ಮಹಿಳೆ ತನ್ನ ಪ್ರೇಮಿ ರಮೇಶ್ ಜೊತೆ ಹೋಗಲು ನಿರ್ಧರಿಸಿದ್ದು, ಆತನನ್ನು ನರಸೀಪುರಕ್ಕೆ ಕರೆಸಿಕೊಂಡಿದ್ದಳು, ನಂತರ ಇಬ್ಬರು ಪರಾರಿಯಾಗಿದ್ದರು.
ಪೊಲೀಸ್ ವಿಚಾರಣೆಯಲ್ಲಿ ಪತಿಯು ಮದುವೆಯಾದಾಗಿನಿಂದ ಚೆನ್ನಾಗಿ ನೋಡಿಕೊಂಡಿಲ್ಲ. ನನ್ನ ಬೇಕು ಬೇಡಗಳನ್ನು ಕೇಳುತ್ತಿರಲಿಲ್ಲ, ಆದ್ದರಿಂದ ನಾನು ರಮೇಶ್ ಜೊತೆಗೆ ಹೋಗಲು ನಿರ್ಧರಿಸಿದೆ ಎಂದು ಮಹಿಳೆ ಹೇಳಿದ್ದಾಳೆ.