Breaking; ತಂದೆ ಮೇಣದ ಪ್ರತಿಮೆ ಮುಂದೆ ಯುವಕನ ವಿವಾಹ
ಮೈಸೂರು, ಮೇ 07; ಯುವಕನೊಬ್ಬ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾಗಲಿದ್ದಾನೆ. ವಿವಾಹ ಶಾಸ್ತ್ರಗಳು ಆರಂಭವಾಗಿದ್ದು, ಭಾನುವಾರ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಾಹ ನಡೆಯಲಿದೆ.
ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ವಿಶೇಷವಾದ ವಿವಾಹ ನಡೆಯುತ್ತಿದೆ. ಡಾ.ಯತೀಶ್ ಹಾಗೂ ಡಾ. ಅಪೂರ್ವ ಮೇಣದ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ನಿನ್ನೆ ಮಠಗಳು, ಇಂದು ಮದುವೆ- ಸಿಎಂ ಬ್ಯುಸಿ: ಉಳಿದಂತೆ ರಾಜಕೀಯ ಬೆಳವಣಿಗೆ ಹೀಗಿವೆ
ಕೋವಿಡ್ ಸೋಂಕು ತಗುಲಿದ್ದ ಯತೀಶ್ ಅವರ ತಂದೆ ರಮೇಶ್ ಒಂದು ವರ್ಷದ ಹಿಂದೆ ಮೃತಪಟ್ಟಿದರು. ತಂದೆಯ ನೆನಪಿನಲ್ಲಿ ಪುತ್ರ ಮೇಣದ ಪ್ರತಿಮೆ ಮಾಡಿಸಿದ್ದು, ಅದರ ಸಮ್ಮುಖದಲ್ಲಿಯೇ ವಿವಾಹವಾಗುತ್ತಿದ್ದಾರೆ. ಈ ಮೂಲಕ ತಂದೆಯ ನೆನಪು ಉಳಿಸಿಕೊಂಡಿದ್ದಾರೆ.
ಆಯುಧ ಪೂಜೆ ದಿನ ಮದುವೆ, ಯುಗಾದಿಗೆ ತಿಥಿ: ಶಂಕರಣ್ಣನ ಬದುಕು ಹೀಗ್ಯಾಕಾಯ್ತು?
ಚಿಕ್ಕಮಗಳೂರು ಜಿಲ್ಲೆ ಕಡೂರ್ ತಾಲೂಕಿನ ಅಜ್ಜಂಪುರ ನಿವಾಸಿಯಾಗಿದ್ದ ರಮೇಶ್ ಪುತ್ರ ಯತೀಶ್ ಮೈಸೂರು ಜೆ. ಎಸ್. ಎಸ್ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.
ಸರ್ಕಾರಿ ಆದೇಶ; ಗ್ರಾಮ ಪಂಚಾಯಿತಿಯಲ್ಲೇ ಇನ್ನು ವಿವಾಹ ನೋಂದಣಿ
ನಂಜನಗೂಡು ತಾಲೂಕಿನ ಮಲ್ಕುಂಡಿಯ ನಿವಾಸಿ ಡಾ. ಅಪೂರ್ವ ಜೊತೆ ವಿವಾಹ ನಡೆಯಲಿದೆ. ಶನಿವಾರ ವಿವಾಹ ಶಾಸ್ತ್ರಗಳು ಆರಂಭವಾಗಿದೆ. ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಯತೀಶ್ ಶಾಸ್ತ್ರಗಳನ್ನು ಮಾಡುತ್ತಿದ್ದಾರೆ. ಭಾನುವಾರ ವಿವಾಹ ನಡೆಯಲಿದೆ.