ಮೈಸೂರು ಮೃಗಾಲಯದಲ್ಲಿ "ಬ್ರಹ್ಮ" ಗಂಡು ಹುಲಿ ಸಾವು
ಮೈಸೂರು, ಜುಲೈ 24: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ "ಬ್ರಹ್ಮ" ಹೆಸರಿನ ಗಂಡು ಹುಲಿಯು (20) ನಿನ್ನೆ ಸಾವನ್ನಪ್ಪಿದೆ. ಹುಲಿಯು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾರಣದಿಂದಾಗಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
Recommended Video
ಯೋಧನ
ಪತ್ನಿಗೆ
ಸರ್ಕಾರಿ
ಕೆಲಸ,
5
ಕೋಟಿ
ದುಡ್ಡು,
ಸೈಟು
|
Oneindia
Kannada
ಬ್ರಹ್ಮ ಹುಲಿಯನ್ನು 2008ರ ಮಾರ್ಚ್ 18ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದಿಂದ ಸೆರೆಹಿಡಿದು ರಕ್ಷಿಸಿ ಮೃಗಾಲಯಕ್ಕೆ ತರಲಾಗಿತ್ತು. ಹುಲಿಯನ್ನು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಅವರು ಹುಲಿಯ ಜೀವಮಾನ ಪರ್ಯಂತಕ್ಕೆ ದತ್ತು ಸ್ವೀಕರಿಸಿದ್ದರು.
ಮೇರುನಟರ ಹೆಸರಲ್ಲಿ ಪ್ರಾಣಿ ದತ್ತು ಸ್ವೀಕಾರದೊಂದಿಗೆ ತೆರೆದ ಮೈಸೂರು ಝೂ
ಹುಲಿಯ ಮರಣಕ್ಕೆ ಮೃಗಾಲಯ ಪ್ರಾಧಿಕಾರವು ಸಂತಾಪ ಸೂಚಿಸಿದೆ.
Comments
English summary
A male tiger named "Brahma" (20) died yesterday at Chamarajendra Zoo in Mysore,