ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಝೂ ಪ್ರಾಣಿಗಳಿಗೆ ಕಿರಿಕಿರಿ ನೀಡಿದ ಧ್ವನಿವರ್ಧಕಗಳು

|
Google Oneindia Kannada News

ಮೈಸೂರು, ಆಗಸ್ಟ್ 11: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ 125ನೇ ವರ್ಷಾಚರಣೆಗಾಗಿ ಆಗಸ್ಟ್ 10 ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅತಿಯಾಗಿ ಧ್ವನಿ ವರ್ಧಕ ಬಳಸಿದ ಪರಿಣಾಮ ಮೃಗಾಲಯದಲ್ಲಿದ್ದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಘಿದೆ ಎಂದು ಕೆಲ ಪ್ರಾಣಿಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಝೂ ಗೆ 125 ವರ್ಷದ ಸಂಭ್ರಮಮೈಸೂರು ಝೂ ಗೆ 125 ವರ್ಷದ ಸಂಭ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತಗೆ ಹಲವು ಗಣ್ಯರು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಒಟ್ಟು 8 ಧ್ವನಿವರ್ಧಕಗಳನ್ನು ಮೃಗಾಲಯ ಆಡಳಿತ ಮಂಡಳಿ ಬಳಸಿಕೊಂಡಿತ್ತು.

Loudspeakers inside Mysuru Zoo irritates it's animals

ಪ್ರಾಣಿ-ಪಕ್ಷಿಗಳಿಗೆ ಶಬ್ದ ಎಂದರೆ ಯಾವಾಗಲೂ ಕಿರಿಕಿರಿಯೇ. ಇದು ಗೊತ್ತಿದ್ದರೂ ಇಷ್ಟೊಂದು ಧ್ವನಿ ವರ್ಧಕಗಳನ್ನು ಬಳಸುವ ಅಗತ್ಯವಿತ್ತೆ ಎಂಬುದು ಹ;ವರ ಪ್ರಶ್ನೆ. ಇತ್ತೀಚೆಗಷ್ಟೇ ಮೃಗಾಲಯದಲ್ಲಿ ಜನಿಸಿದ ಪಾರ್ವತಿ ಎಂಬ ಆನೆ ಮತ್ತು ಇಲ್ಲಿಯೇ ಇರುವ ಖಡ್ಗಮೃಗಗಳಿಗೆ ತೀರಾ ಹತ್ತಿರದಲ್ಲೇ ಧ್ವನಿವರ್ಧಕಗಳನ್ನು ಇಟ್ಟಿದ್ದರಿಂದ ಪ್ರಾಣಿಗಳೆಲ್ಲ ತೀವ್ರವಾಗಿ ಭಯಗೊಂದಿದ್ದವೆಂಬುದು ಪ್ರತ್ಯಕ್ಷದರ್ಶಿಗಳ ಮಾತು.

ಮೈಸೂರಲ್ಲಿ ರಸ್ತೆ ಮೇಲೆಯೇ ಬಂದಿತ್ತು ಹುಲಿ!
ಮೃಗಾಲಯಕ್ಕೆ 125 ವರ್ಷ ತುಂಬಿದ್ದಕ್ಕಾಗಿ ಕಾರ್ಯಕ್ರಮ ಏರ್ಪಡಿಸಿದ್ದು ಮೆಚ್ಚುವ ಸಂಗತಿ, ಆದರೆ ಅದಕ್ಕಾಗಿ ಇಷ್ಟೆಲ್ಲ ಪ್ರಮಾಣದ ಧ್ವನಿ ವರ್ಧಕಗಳನ್ನು ಬಳಸುವ ಅಗತ್ಯವಿರಲಿಲ್ಲ, ಮುಂದೆ ಇಂಥ ಕಾರ್ಯಕ್ರಮ ಆಯೋಜಿಸುವಾಗ ಪ್ರಾಣಿಗಳ ಹಿತದ ಬಗ್ಗೆಯೂ ಯೋಚಿಸಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Due to usage of loudspeakers inside Mysore Zoo premise, the animals and birds inside were put to a lot of hardship. As part of 125th year celebration of Sri Chamarajendra Zoological Gardens' authorities had organised a stage programme in the newly constructed Amphitheatre where Chief Minister of karnataka Siddaramaiah was the chief guest. The programme took place on Aug 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X