ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಶನಿವಾರದ ಅಪರಾಧ ಸುದ್ದಿಗಳ ರೌಂಡಪ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 4 : ವ್ಯಾಪಾರದಲ್ಲಿ ನಷ್ಟವುಂಟಾದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವನನ್ನು ಮಂಡಿಮೊಹಲ್ಲಾ ನಿವಾಸಿ ಪ್ರಕಾಶ್(40) ಎಂದು ಗುರುತಿಸಲಾಗಿದೆ. ಈತ ಮೈಸೂರು-ತಿ.ನರಸೀಪುರ ರಸ್ತೆಯಲ್ಲಿನ ಆಲನಹಳ್ಳಿ ಬಡಾವಣೆಯಲ್ಲಿ ಪ್ರಕಾಶ್ ಇಲೆಕ್ಟ್ರಿಕಲ್ಸ್ ಮಳಿಗೆಯನ್ನು ನಡೆಸುತ್ತಿದ್ದ ಎನ್ನಲಾಗಿದೆ.

Loss in bussiness: A man commits suicide in Mysore

ಆದರೆ ಕೆಲವು ದಿನಗಳಿಂದ ವ್ಯಾಪಾರದಲ್ಲಿ ನಷ್ಟವುಂಟಾಗಿದೆ ಎಂದು ಬೇಸರದಲ್ಲಿದ್ದ ಎಂದು ತಿಳಿದು ಬಂದಿದೆ. ಶುಕ್ರವಾರ ತನ್ನ ಮಳಿಗೆಯ ಹಿಂದುಗಡೆ ಇರುವ ಜಾಗದಲ್ಲಿ ನೇಣಿಗೆ ಶರಣಾಗಿದ್ದಾನೆ. ಅಂಗಡಿ ತೆರೆದಿಟ್ಟು ಹೊರಹೋದಾತ ಬಹಳ ಸಮಯವಾದರೂ ಹಿಂದಿರುಗಿ ಬಾರದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಬಂದು ನೋವಿದಾಗ ಆತ ನೇಣಿಗೆ ಶರಣಾಗಿರುವುದು ಕಂಡು ಬಂತು.

ಸ್ಥಳಕ್ಕೆ ಆಲನಹಳ್ಳಿ ಠಾಣೆಯ ಇನ್ಸಪೆಕ್ಟರ್ ಶೇಖರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಕಿರುಕುಳ : ಮಗಳನ್ನು ನೇಣಿಗೇರಿಸಿದ್ದಾರೆಂದು ಹೆತ್ತವರ ಆರೋಪ

ಮಗಳಿಗೆ ಗಂಡ, ಮಾವ, ಅತ್ತೆ ವರದಕ್ಷಿಣೆ ಕಿರುಕುಳ ನೀಡಿದ್ದು ಮಾತ್ರವಲ್ಲದೇ ಹೊಡೆದು ನೇಣಿಗೇರಿಸಿದ್ದಾರೆ ಎಂದು ಆರೋಪಿಸಿ ಹೆತ್ತವರು ಗೋಳಿಡುತ್ತಿದ್ದ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

Loss in bussiness: A man commits suicide in Mysore

ಮೃತ ದುರ್ದೈವಿ ಮಹಿಳೆಯನ್ನು ಕುರುಬಗೇರಿ ನಿವಾಸಿ ಅಮೃತ (22) ಎಂದು ಗುರುತಿಸಲಾಗಿದೆ. ಅಮೃತ ಕೆ. ಆರ್. ನಗರ ತಾಲೂಕು ಅಡಗೂರಿನ ಧರ್ಮೇಶ್ ಹಾಗೂ ಲಕ್ಷ್ಮಿ ದಂಪತಿ ಪುತ್ರಿಯಾಗಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಮೈಸೂರಿನ ಕುರುಬಗೇರಿಯ ಸೋಮಣ್ಣ ಹಾಗೂ ಅನ್ನಪೂರ್ಣ ದಂಪತಿ ಪುತ್ರ ವಿನಯ್ ಎಂಬಾತನಿಗೆ ಕೊಟ್ಟು ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು.

ಇತ್ತೀಚೆಗೆ ವಿನಯ್ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ ತಮ್ಮ ಮಗಳನ್ನು ಸಾಯಿಸಿ ನೇಣುಹಾಕಿದ್ದಾರೆ ಎಂದು ಅಮೃತ ಪೋಷಕರು ಆರೋಪಿಸುತ್ತಿದ್ದಾರೆ.

Loss in bussiness: A man commits suicide in Mysore

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಮೃತ ಅತ್ತೆ ನಾಗರತ್ನ, ಮಾವ ಸೋಮಣ್ಣ ಹಾಗೂ ಪತಿ ವಿನಯ್ ಪರಾರಿಯಾಗಿದ್ದಾರೆ. ಅಮೃತ ಪೋಷಕರು ಸ್ಥಳಕ್ಕೆ ತಹಶೀಲ್ದಾರ್ ರು ಬರುವಂತೆ ಪಟ್ಟು ಹಿಡಿದಿದ್ದಾರೆ.
ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆಯ ಮೇಲೆ ಮಾರ್ಬಲ್ ಬಿದ್ದು ವ್ಯಕ್ತಿ ಸಾವು

ತಲೆ ಮೇಲೆ ಮಾರ್ಬಲ್ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಮೈಸೂರಿನ ನಂಜುಮಳಿಗೆಯ ಬಳಿ ನಡೆದಿದೆ. ಮೃತನನ್ನು ಎಚ್.ಡಿ.ಕೋಟೆ ತಾಲೂಕಿನ ಚಿಕ್ಕ ನಂದಿ ನಿವಾಸಿ ಗಿರೀಶ್ (26) ಎಂದು ಗುರುತಿಸಲಾಗಿದೆ. ಈತ ನಂಜುಮಳಿಗೆಯ ಬಳಿಯಿದ್ದ ರಾಜಸ್ಥಾನ್ ಮಾರ್ಬಲ್ಸ್ ನಲ್ಲಿ ಲಾರಿಯಿಂದ ಮಾರ್ಬಲ್ ಇಳಿಸುವಾಗ ಆಯತಪ್ಪಿ ಗಿರೀಶ್ ಮೇಲೆ ಮಾರ್ಬಲ್ ಬಿದ್ದಿದ್ದು, ಗಿರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ದುರ್ಘಟನೆ ಸಂಭವಿಸುತ್ತಿದ್ದಂತೆ ರಾಜಸ್ಥಾನ್ ಮಾರ್ಬಲ್ಸ್ ಮಾಲಿಕರು ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಲಕ್ಷ್ಮಿಪುರಂ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ. ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A man who was depressed by the loss in bussiness hanged himself in Mysore. Complaint has been registerd in Alanahalli Police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X