ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 'ಲೋಕೇಶ್ ನೆನಪು'

|
Google Oneindia Kannada News

ಮೈಸೂರು, ಮೇ 17: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೇ.19 ರಂದು ನಟ ಲೋಕೇಶ್ 73 ನೇ ಜನ್ಮ ದಿನದ ಅಂಗವಾಗಿ 'ಲೋಕೇಶ್ ನೆನಪು' ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ತಿಳಿಸಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ನಟನ ರಂಗಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮವನ್ನು ಕಳೆದ 16 ವರ್ಷದಿಂದ 'ಲೋಕೇಶ್ ನೆನಪು' ಹೆಸರಿನಲ್ಲಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಮೈಸೂರಿನಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

Lokesh Nenapu programme is organized at Mysuru

ಮೇ 18 ರಂದು 'ಸಡನ್ನಾಗ್ ಸತ್ತೋದ್ರೆ?!' ಕಾಮಿಡಿ ಡ್ರಾಮಾ ಪ್ರದರ್ಶನಮೇ 18 ರಂದು 'ಸಡನ್ನಾಗ್ ಸತ್ತೋದ್ರೆ?!' ಕಾಮಿಡಿ ಡ್ರಾಮಾ ಪ್ರದರ್ಶನ

ಕಾರ್ಯಕ್ರಮದಲ್ಲಿ ಹಿರಿಯ ರಂಗತಜ್ಞ, ವೃತ್ತಿ ರಂಗಭೂಮಿಯ ಚಿಂದೋಡಿ ಬಂಗಾರೇಶ್ ಅವರಿಗೆ ಸುಬ್ಬಯ್ಯ ನಾಯ್ಡು ಪ್ರಶಸ್ತಿ, ಚಲನಚಿತ್ರ ಕಲಾವಿದೆ ಶೈಲಶ್ರೀ ಅವರಿಗೆ ಲಕ್ಷ್ಮೀಬಾಯಿ ಪ್ರಶಸ್ತಿ, ಚಿತ್ರನಟ ರಮೇಶ್ ಭಟ್ ರವರಿಗೆ ಲೋಕೇಶ್ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.

Lokesh Nenapu programme is organized at Mysuru

ಇದೇ ವೇಳೆ ಮೈಸೂರಿನ ಕಲಾವಿದರಾದ ರಾಜಶೇಖರ ಕದಂಬ ಮತ್ತು ಶಂಕರ್ ಅಶ್ವಥ್ ಅವರನ್ನು ಗೌರವಿಸಲಾಗುವುದು. ಅಲ್ಲದೇ, ಮಂಡ್ಯ ರಮೇಶ್ ನಿರ್ದೇಶನದ 'ಶೂದ್ರಕನ ಮೃಚ್ಛಕಟಿಕ' ನಾಟಕ ಕೂಡ ಇದೇ ವೇಳೆ ಪ್ರದರ್ಶನಗೊಳ್ಳಲಿದೆ. ಸುದ್ದಿಗೋಷ್ಟಿಯಲ್ಲಿ ಶಂಕರ್ ಅಶ್ವಥ್, ರಾಜಶೇಖರ ಕದಂಬ ಭಾಗಿಯಾಗಿದ್ದರು.

English summary
Lokesh Nenapu programme is organized at Natana school of Theatre arts, Mysuru. Chindodi Bangaresh, Ramesh Bhat, Shaila shree will be honored in this programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X