ನಂಜನಗೂಡಿನ ಹಾಸ್ಟೆಲ್ ನಲ್ಲಿ ನೌಕರರ ಹೋಂ ಕ್ವಾರಂಟೈನ್ ಗೆ ಸ್ಥಳೀಯರ ವಿರೋಧ
ಮೈಸೂರು,
ಮಾ.31:
ನಂಜನಗೂಡಿನ
ಜುಬಿಲೆಂಟ್
ಕಾರ್ಖಾನೆಯ
ಸಾವಿರಕ್ಕೂ
ಹೆಚ್ಚು
ನೌಕಕರನ್ನು
ಹೋಂ
ಕ್ವಾರಂಟೈನ್
ನಲ್ಲಿರಿಸಲು
ಯೋಜಿಸಲಾಗಿದ್ದು,
ಇದಕ್ಕಾಗಿ
ಅಧಿಕಾರಿಗಳು
ಇಲ್ಲಿನ
ಕೆಎಚ್
ಬಿ
ಕಾಲೊನಿಯಲ್ಲಿರುವ
ಬಿಸಿಎಂ
ಹಾಸ್ಟೆಲ್
ಅನ್ನು
ಗುರುತಿಸಿದ್ದರು.
ಆದರೆ
ಇಲ್ಲಿರಿಸಲು
ಸ್ಥಳೀಯರಿಂದಲೇ
ವಿರೋಧ
ವ್ಯಕ್ತವಾಗಿದೆ.
ಹಾಸ್ಟೆಲ್ ನ ಅಕ್ಕಪಕ್ಕದ ನಿವಾಸಿಗಳು ಇದನ್ನು ವಿರೋಧಿಸಿ ಹಾಸ್ಟೆಲ್ ಮುಂಭಾಗ ನಿನ್ನೆ ಪ್ರತಿಭಟನೆ ನಡೆಸಿದರು. ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅಲ್ಲಿನ 9 ಮಂದಿ ಕಾರ್ಮಿಕರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಅಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ ಮಂದಿ ಕಾರ್ಮಿಕರಿದ್ದಾರೆ. ಹೀಗಾಗಿ ಅವರನ್ನು ಹೋಂ ಕ್ವಾರೆಂಟೈನ್ ಮಾಡಲಾಗಿತ್ತು.
ಲಾಕ್ ಡೌನ್ ಉಲ್ಲಂಘಿಸುವ ವಾಹನ ಸವಾರರಿಗೆ ನೋಟಿಸ್
ಎಲ್ಲರನ್ನು ಹಾಸ್ಟೆಲ್ ನಲ್ಲಿ ಇರಿಸಲು ನಿರ್ಧರಿಸಲಾಗಿತ್ತು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಎಸ್.ಪಿ.ಮಹೇಶ್, ಎನ್.ಎಸ್.ಯೋಗೀಶ್ ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಎಲ್ಲರೂ ಪರಸ್ಪರ ಅಂತರ ಕಾಯ್ದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ದೇಶದಲ್ಲಿರುವ ಕೊರೊನಾ ಶಂಕಿತರನ್ನು ಹೆಚ್ಚಿನ ಜನ ಸಂದಣಿ ಇಲ್ಲದಿರುವ ಪಟ್ಟಣಗಳ ಹೊರ, ನಿರ್ಜನ ಪ್ರದೇಶಗಳಿಗೆ ಈ ಕೂಡಲೇ ವರ್ಗಾಯಿಸಿ. ಜನರಿಗೆ ಕೊರೊನಾ ಕಾಡ್ಗಿಚ್ಚಿನಂತೆ ಹರಡದಂತೆ ಕ್ರಮವಹಿಸಲು ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಇಂದು ಮನವಿ ಸಲ್ಲಿಸಿದರು.