ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ ಡಿ ಕೋಟೆಯಲ್ಲಿ ಹಾಡಹಗಲೇ ಯುವಕನ ಮೇಲೆ ಚಿರತೆ ದಾಳಿ

|
Google Oneindia Kannada News

ಮೈಸೂರು, ಮಾರ್ಚ್ 6: ಹಾಡಹಗಲೇ ಚಿರತೆಯೊಂದು ಆಡುಗಳನ್ನು ಮೇಯಿಸುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಎಚ್ ಡಿ ಕೋಟೆ ಗ್ರಾಮದಲ್ಲಿ ಜರುಗಿದೆ.

ಜಪ್ತಿ ಬಳಿ ಮಹಿಳೆಯ ಮೇಲೆ ಚಿರತೆ ದಾಳಿ; ಗಂಭೀರ ಗಾಯಜಪ್ತಿ ಬಳಿ ಮಹಿಳೆಯ ಮೇಲೆ ಚಿರತೆ ದಾಳಿ; ಗಂಭೀರ ಗಾಯ

ಜೋನಿಗಿರಿ ಬೀದಿಯಲ್ಲಿರುವ ಮಖಾನ್ ಹತ್ತಿರ ಯರಹಳ್ಳಿ ಗ್ರಾಮದ ಸುರೇಶ್ (25) ತಮ್ಮ ಆಡುಗಳನ್ನು ಪಾಳು ಬಿದ್ದಿರುವ ಜಮೀನಿನಲ್ಲಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಪೊದೆಯಿಂದ ಬಂದ ಚಿರತೆ ದಿಢೀರನೆ ಆಡುಗಳ ಮೇಲೆ ದಾಳಿ ನಡೆಸಿದೆ.

 ಹೋಟೆಲ್ ನ ಬೇಸ್ ಮೆಂಟ್ ನಲ್ಲಿ ಕಾಣಿಸಿಕೊಂಡಿತು ಚಿರತೆ, ಆಮೇಲೆ ಏನು? ಹೋಟೆಲ್ ನ ಬೇಸ್ ಮೆಂಟ್ ನಲ್ಲಿ ಕಾಣಿಸಿಕೊಂಡಿತು ಚಿರತೆ, ಆಮೇಲೆ ಏನು?

ಇದರಿಂದ ಗಾಬರಿಗೊಂಡ ಸುರೇಶ್ ಚಿರತೆಯಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಆತನ ಮೇಲೂ ದಾಳಿ ನಡೆಸಿ ಭುಜ ಮತ್ತಿತರ ಭಾಗಗಳನ್ನು ಗಾಯಗೊಳಿಸಿದೆ. ಈ ವೇಳೆ ಸುರೇಶ ಭಯದಿಂದ ಕಿರುಚಿದ್ದಾನೆ. ಆತನ ಕಿರುಚಾಟ ಕೇಳಿ ತಾರಕ ನದಿ ಸಮೀಪದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಚಿರತೆ ಅಲ್ಲಿಂದ ಪರಾರಿಯಾಗಿದೆ.

Leopard attacks young man in HD Kote

ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಸದಸ್ಯರು ಚಿರತೆಯಿಂದ ದಾಳಿಗೊಳಗಾಗಿದ್ದ ಸುರೇಶ್ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಚಿರತೆ ದಾಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಪಂಜರ ಇರಿಸಿದ್ದಾರೆ.

English summary
Leopard attacks young man in HD Kote.Young man was seriously injured in this incident. Now forest department officials arrived at the incident place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X