ದಸರಾ ಆನೆ ದ್ರೋಣ ಸಾವಿಗೆ ಕಂಬನಿ ಮಿಡಿದ ಗಣ್ಯರು
ಮೈಸೂರು, ಏಪ್ರಿಲ್ 26 : ಮೈಸೂರು ದಸರಾ ಆನೆ ದ್ರೋಣ ಆನೆಯ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ನೀರು ಕುಡಿಯುವಾಗ ಕುಸಿದು ಬಿದ್ದು, ದ್ರೋಣ ಆನೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿತ್ತು.
ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ದ್ರೋಣ (39) ನೀರು ಕುಡಿಯುವಾಗಿ ಬಿದ್ದು ಮೃತಪಟ್ಟಿದೆ. ಹೃದಯಾಘಾತದಿಂದಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು
ದಸರಾ ಆನೆಗಳ ಬಳಗದಲ್ಲಿ ದ್ರೋಣ ಎಂಬ ಆನೆ 18 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ದಾಖಲೆ ಮಾಡಿತ್ತು. 1998ರಲ್ಲಿ ವಿದ್ಯುತ್ ತಂತಿ ತಗುಲಿ ಅದು ಮೃತಪಟ್ಟಿತ್ತು.
ಬಂಡೀಪುರದಲ್ಲಿ ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಕಾಡಾನೆ
ಬಳಿಕ ಮತ್ತೊಂದು ಕಿರಿಯ ಆನೆಗೆ ದ್ರೋಣ ಎಂದು ನಾಮಕರಣ ಮಾಡಲಾಗಿತ್ತು. ಮೈಸೂರು ದಸರಾ ಆನೆಗಳ ಬಳಗ ಸೇರಿದ್ದ ಕಿರಿಯ ದ್ರೋಣ ಕಳೆದ ವರ್ಷ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿತ್ತು.
ನಾಪತ್ತೆಯಾಗಿದ್ದ ದಸರಾ ಆನೆ ಅಶೋಕ ಡಿ.ಬಿ. ಕುಪ್ಪೆಯಲ್ಲಿ ಪತ್ತೆ
ಶುಕ್ರವಾರ 39 ವರ್ಷದ ದ್ರೋಣ ಆನೆ ಮೃತಪಟ್ಟಿದೆ. ದಸರಾ ಆನೆ ದ್ರೋಣ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಈ ಕುರಿತು ಟ್ವೀಟ್ ಮಾಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕಳೆ ತಂದುಕೊಡುತ್ತಿದ್ದ ಆನೆ ದ್ರೋಣ ಇನ್ನಿಲ್ಲ ಎಂದು ತಿಳಿದು ಅತೀವ ದುಃಖವಾಯಿತು. ಕೊಡಗಿನ ಮತ್ತಿಗೋಡು ಶಿಬಿರದಲ್ಲಿದ್ದ ದ್ರೋಣ ದೇಶ ವಿದೇಶದ ಪ್ರವಾಸಿಗರಿಗೆ ನೆಚ್ಚಿನ ಆನೆಯಾಗಿತ್ತು. ದ್ರೋಣನಿಗೆ ನಲ್ಮೆಯ ಅಶ್ರುತರ್ಪಣ.
— H D Kumaraswamy (@hd_kumaraswamy) April 26, 2019
'ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕಳೆ ತಂದುಕೊಡುತ್ತಿದ್ದ ಆನೆ ದ್ರೋಣ ಇನ್ನಿಲ್ಲ ಎಂದು ತಿಳಿದು ಅತೀವ ದುಃಖವಾಯಿತು. ಕೊಡಗಿನ ಮತ್ತಿಗೋಡು ಶಿಬಿರದಲ್ಲಿದ್ದ ದ್ರೋಣ ದೇಶ ವಿದೇಶದ ಪ್ರವಾಸಿಗರಿಗೆ ನೆಚ್ಚಿನ ಆನೆಯಾಗಿತ್ತು. ದ್ರೋಣನಿಗೆ ನಲ್ಮೆಯ ಅಶ್ರುತರ್ಪಣ' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ ಗಾಂಭೀರ್ಯದ ನಡಿಗೆಯೊಂದಿಗೆ ಅಂಬಾರಿ ಜೊತೆ ಹೆಜ್ಜೆ ಹಾಕುತ್ತಿದ್ದ ದ್ರೋಣ ಲಕ್ಷಾಂತರ ಜನರ ಅಭಿಮಾನಿಯಾಗಿದ್ದ. ಮತ್ತು ಮುಂದಿನ ದಿನಗಳಲ್ಲಿ ಪ್ರಸಿದ್ದ ಚಿನ್ನದ ಅಂಬಾರಿ ಹೊರುವ ಭರವಸೆಯ ನಾಯಕನಾಗಿದ್ದ. ದ್ರೋಣನ ಆತ್ಮಕ್ಕೆ ಶಾಂತಿ ನೀಡಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. (2/2) pic.twitter.com/DBaNT5W0cA
— GT Devegowda (@GTDevegowda) April 26, 2019