ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಹಿನ್ನೆಲೆ ಬೆಂಗಳೂರಿಗೆ ತೆರಳಿದ ಸಿಎಂ

|
Google Oneindia Kannada News

ಮೈಸೂರು, ನವೆಂಬರ್.12: ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನ ಎಚ್. ಡಿ. ಕೋಟೆಯ ರೆಸಾರ್ಟ್ ಒಂದರಲ್ಲಿ ವಿಶಾಂತ್ರಿಯಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೀಗ ರಸ್ತೆ ಮೂಲಕ ಎಚ್​.ಡಿ.ಕೋಟೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ

ದಿವಂಗತ ಅನಂತಕುಮಾರ್ ಅಂತಿಮ ದರ್ಶನ ಪಡೆಯಲು ಎಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿ ಖಾಸಗಿ ರೆಸಾರ್ಟ್​ ನಿಂದ ಹಿಂತಿರುಗಿದ್ದು, ಇವರ ಜೊತೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಇದ್ದಾರೆ.

 ಅನಂತ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಖಾದರ್, ಶಕುಂತಲಾ ಶೆಟ್ಟಿ ಅನಂತ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಖಾದರ್, ಶಕುಂತಲಾ ಶೆಟ್ಟಿ

ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ರೆಸಾರ್ಟ್​ನಲ್ಲಿ ವಿಶಾಂತ್ರಿಯಲ್ಲಿದ್ದ ಕುಮಾರಸ್ವಾಮಿ ರಾಗಿ ರೊಟ್ಟಿ, ರಾಗಿ ಮುದ್ದೆ, ಸೊಪ್ಪು, ಸಾಂಬಾರ ಮಾತ್ರ ಸೇವಿಸಿದ್ದರು ಎನ್ನಲಾಗಿದೆ.

Kumaraswamy has traveled from HD Kote to Bangalore

ಇನ್ನು ಸಿಎಂಗೆ ಕಳೆದ ರಾತ್ರಿ ಚಿಕಿತ್ಸೆ ನೀಡಲು ಏಳು ಮಂದಿ ವೈದ್ಯರ ತಂಡ ರೆಸಾರ್ಟ್​ಗೆ ತೆರಳಿತ್ತು. ಸಚಿವ ಸಾ.ರಾ. ಮಹೇಶ್ ರೆಸಾರ್ಟ್‌ಗೆ ಭೇಟಿ ನೀಡಿ, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

 ಅನಂತ ಕುಮಾರ್ ಬಾಲ್ಯದಲ್ಲಿ ಹೀಗಿದ್ದರು: ಅಪರೂಪದ ಫೋಟೊಗಳು ಅನಂತ ಕುಮಾರ್ ಬಾಲ್ಯದಲ್ಲಿ ಹೀಗಿದ್ದರು: ಅಪರೂಪದ ಫೋಟೊಗಳು

ಕುಮಾರಸ್ವಾಮಿಗೆ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಏಳು ಮಂದಿ ವೈದ್ಯರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಅವರೆಲ್ಲರೂ ಸಿಎಂ ಹಿಂತಿರುಗಿದ ಬಳಿಕ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.

English summary
Union Minister Ananth Kumar's death:Chief Minister Kumaraswamy has traveled from HD Kote to Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X