ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಹಿನ್ನೆಲೆ ಬೆಂಗಳೂರಿಗೆ ತೆರಳಿದ ಸಿಎಂ
ಮೈಸೂರು, ನವೆಂಬರ್.12: ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನ ಎಚ್. ಡಿ. ಕೋಟೆಯ ರೆಸಾರ್ಟ್ ಒಂದರಲ್ಲಿ ವಿಶಾಂತ್ರಿಯಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೀಗ ರಸ್ತೆ ಮೂಲಕ ಎಚ್.ಡಿ.ಕೋಟೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ
ದಿವಂಗತ ಅನಂತಕುಮಾರ್ ಅಂತಿಮ ದರ್ಶನ ಪಡೆಯಲು ಎಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿ ಖಾಸಗಿ ರೆಸಾರ್ಟ್ ನಿಂದ ಹಿಂತಿರುಗಿದ್ದು, ಇವರ ಜೊತೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಇದ್ದಾರೆ.
ಅನಂತ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಖಾದರ್, ಶಕುಂತಲಾ ಶೆಟ್ಟಿ
ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ರೆಸಾರ್ಟ್ನಲ್ಲಿ ವಿಶಾಂತ್ರಿಯಲ್ಲಿದ್ದ ಕುಮಾರಸ್ವಾಮಿ ರಾಗಿ ರೊಟ್ಟಿ, ರಾಗಿ ಮುದ್ದೆ, ಸೊಪ್ಪು, ಸಾಂಬಾರ ಮಾತ್ರ ಸೇವಿಸಿದ್ದರು ಎನ್ನಲಾಗಿದೆ.
ಇನ್ನು ಸಿಎಂಗೆ ಕಳೆದ ರಾತ್ರಿ ಚಿಕಿತ್ಸೆ ನೀಡಲು ಏಳು ಮಂದಿ ವೈದ್ಯರ ತಂಡ ರೆಸಾರ್ಟ್ಗೆ ತೆರಳಿತ್ತು. ಸಚಿವ ಸಾ.ರಾ. ಮಹೇಶ್ ರೆಸಾರ್ಟ್ಗೆ ಭೇಟಿ ನೀಡಿ, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.
ಅನಂತ ಕುಮಾರ್ ಬಾಲ್ಯದಲ್ಲಿ ಹೀಗಿದ್ದರು: ಅಪರೂಪದ ಫೋಟೊಗಳು
ಕುಮಾರಸ್ವಾಮಿಗೆ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಏಳು ಮಂದಿ ವೈದ್ಯರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದು, ಅವರೆಲ್ಲರೂ ಸಿಎಂ ಹಿಂತಿರುಗಿದ ಬಳಿಕ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.