ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣರಾಜ ಅಭ್ಯರ್ಥಿ ರಾಮದಾಸ್ ಪರ ಬ್ಯಾಟ್ ಬೀಸಿದ ವಿಜಯೇಂದ್ರ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 1 : ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಲು ಮಾಜಿ ಸಚಿವ ಹಾಗೂ ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಎಸ್.ಎ. ರಾಮದಾಸ್ ಕಾರಣ ಎಂಬ ಆರೋಪಗಳಿಗೆ ಖುದ್ದು ವಿಜಯೇಂದ್ರರವರೇ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆಗೊಳಿಸಿರುವ ವಿಜಯೇಂದ್ರ ಅವರು, ಸಮುದಾಯದವರು ಹಾಗೂ ಪ್ರತಿಯೊಬ್ಪರೂ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಎಸ್.ಎ. ರಾಮದಾಸ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ 5 ವರ್ಷ ಅವಧಿ ಪೂರೈಸಬೇಕು. ಅಷ್ಟೇ ಅಲ್ಲ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಪರವಾದ ಅಲೆಯಿದ್ದು ಅಲ್ಲಿ ಬಿಜೆಪಿ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಈ ಮಧ್ಯೆ ಕೆಲ ಕಾಂಗ್ರೆಸ್ಸಿಗರು ಸಮುದಾಯದ ಹೆಸರು ಹೇಳಿಕೊಂಡು ಇನ್ನಿಲ್ಲದ ವದಂತಿ ಹಬ್ಬಿಸುತ್ತಿದ್ದಾರೆ. ಲಿಂಗಾಯತ- ವೀರಶೈವ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್‍ನವರ ಮಾತುಗಳಿಗೆ ಸಮುದಾಯದ ಯಾರೊಬ್ಬರೂ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ವಿಜಯೇಂದ್ರ ಕೈತಪ್ಪಿದ ಟಿಕೆಟ್: ಅನಂತ ಕುಮಾರ್ ಮೈಸೂರು ಪ್ರವಾಸ ರದ್ದು!ವಿಜಯೇಂದ್ರ ಕೈತಪ್ಪಿದ ಟಿಕೆಟ್: ಅನಂತ ಕುಮಾರ್ ಮೈಸೂರು ಪ್ರವಾಸ ರದ್ದು!

ನೋಟಾ ಕುರಿತಂತೆ ಎಚ್ಚರಿಕೆಯ ನಿರ್ಧಾರ ಕೈಗೊಳ್ಳಲು ಸಲಹೆ :
ವರುಣಾ ಕ್ಷೇತ್ರದಲ್ಲಿ ನೋಟಾ ಪ್ರಯೋಗ ಅಭಿಯಾನದ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದ್ದು ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ಬಿಜೆಪಿ ವರುಣ ಕ್ಷೇತ್ರದ ಸಂಭವನೀಯ ಅಭ್ಯರ್ಥಿಯಾಗಿದ್ದ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.

ಕೆಲವು ಶಕ್ತಿಗಳು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗದಂತೆ ತಡೆಯಲು ಅಪಪ್ರಚಾರ ಮಾಡಿ, ಗೊಂದಲ ಸೃಷ್ಟಿಸಿ ತೊಂದರೆ ಕೊಡಲು ಪಿತೂರಿ ನಡೆಸುತ್ತಿವೆ. ಆದ್ದರಿಂದ ಯಾವುದೇ ಅಪಪ್ರಚಾರಗಳಿಗೆ ಪ್ರಚೋದನೆಗೊಳ್ಳಗಾಗಬಾರದು.

Karnataka elections: BY Vijayendra defends SA Ramadas

ಸೇವ್ ಬಿಜೆಪಿ ಅಭಿಯಾನ:
ವರುಣಾ ಕ್ಷೇತ್ರದ ನೊಂದ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ 'ಬಿಜೆಪಿ ಉಳಿಸಿ' ಅಭಿಯಾನ ಆರಂಭವಾಗಿದ್ದು, ಪಕ್ಷದ ಕೆಲ ಮುಖಂಡರ ವಿರುದ್ಧ ಘೋಷಣೆಗಳಿರುವ ಕರಪತ್ರಗಳು ವೈರಲ್ ಆಗಿವೆ.

ಒಡೆದು ಆಳುವ ಅನಂತಕುಮಾರ್ ಮತ್ತು ಸಂತೋಷ್‌ ಅವರನ್ನು ವಜಾಗೊಳಿಸಿ ಎಂದು ಬರೆದಿರುವ ಕರಪತ್ರಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಕಾನೂನು ಗೌರವಿಸಿ, ಕಾನೂನು ಕೈಗೆತ್ತಿಕೊಳ್ಳುವುದು ಬೇಡ, ಹೋರಾಟ ಶಾಂತವಾಗಿರಲಿ. ಮೋದಿ, ಅಮಿತ್‌ ಶಾ ಅವರಿಗೆ ತಲುಪುವವರೆಗೆ ಪ್ರತಿಭಟನೆ ನಡೆಸಿ ಎಂಬ ಅಂಶಗಳು ಇದರಲ್ಲಿವೆ. ಕರಪತ್ರದ ಕೊನೆಯಲ್ಲಿ ವರುಣಾ ಕ್ಷೇತ್ರದ ನೊಂದ ಬಿಜೆಪಿ ಕಾರ್ಯಕರ್ತರು ಎಂದು ಬರೆಯಲಾಗಿದೆ.

ವರುಣಾದಲ್ಲಿ ವಿಜಯೇಂದ್ರಗೇ ಟಿಕೆಟ್ ಕೊಡಿ: ಜಿಟಿ ದೇವೇಗೌಡ ಒತ್ತಾಯವರುಣಾದಲ್ಲಿ ವಿಜಯೇಂದ್ರಗೇ ಟಿಕೆಟ್ ಕೊಡಿ: ಜಿಟಿ ದೇವೇಗೌಡ ಒತ್ತಾಯ

ಕೇಂದ್ರ ಸಚಿವ ಅನಂತ್ ಕುಮಾರ್‌ ಮತ್ತು ಸಹ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿ.ವೈ. ವಿಜಯೇಂದ್ರ ಅವರ ಕೆಲ ಬೆಂಬಲಿಗರು ಈ ಇಬ್ಬರನ್ನು ವಜಾಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಅಭಿಯಾನ ನಡೆಸಿದ್ದಾರೆ..

ಜಾಥಾ ನಡೆಸುತ್ತಿದ್ದವರ ಬಂಧನ :
ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೋಟಾಕ್ಕೆ ಮತ ಚಲಾಯಿಸುವಂತೆ ಮತದಾರರನ್ನು ಸೆಳೆಯಲು ಬೈಕ್ ಜಾಥಾ ನಡೆಸುತ್ತಿದ್ದ ಇಬ್ಬರ ವಿರುದ್ಧ ಚುನಾವಣಾಧಿಕಾರಿ ನೀಡಿದ ದೂರನ್ನಾಧರಿಸಿ ಬಿಳಿಗೆರೆ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ದಿಂದ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅನುಮತಿ ಪಡೆಯದೆ ಬೈಕ್ ಜಾಥಾ ಮೂಲಕ ನೋಟಾ ಅಭಿಯಾನ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸೆಕ್ಟರ್ ಅಧಿಕಾರಿಗಳ ತಂಡ ಗುಂಪಿನಲ್ಲಿ ತೆರಳುತ್ತಿದ್ದ ಇಬ್ಬರನ್ನು ಪೊಲೀಸರ ನೆರವಿನೊಂದಿಗೆ ವಶಕ್ಕೆ ಪಡೆದು ನಂತರ ಬಿಳಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

English summary
Karnataka assembly elections 2018: BJP Leader B Y Vijayendra requested his followers not to blame SA Ramdas who is a BJP candidate from Krishnaraja constituency. And said them to support him in assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X