ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗೆ ಒಲಿದ ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿ ಆತಿಥ್ಯ

|
Google Oneindia Kannada News

ಮೈಸೂರು, ಜುಲೈ 30: 2019ರ ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿಯ ಆತಿಥ್ಯವನ್ನು ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರು ವಹಿಸಿಕೊಳ್ಳಲಿದೆ. ಇದೇ ಸೆಪ್ಟೆಂಬರ್ 6, 7 ಮತ್ತು 8ರಂದು ಕೆಸಿಸಿ ಮೂರನೇ ಆವೃತ್ತಿಯ ಪಂದ್ಯಗಳು ನಗರದಲ್ಲಿ ನಡೆಯಲಿವೆ ಎಂದು ನಟ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.

 ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ: ಮೈಸೂರು ವಾರಿಯರ್ಸ್ ನಿಂದ ಟ್ಯಾಲೆಂಟ್ ಹಂಟ್ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ: ಮೈಸೂರು ವಾರಿಯರ್ಸ್ ನಿಂದ ಟ್ಯಾಲೆಂಟ್ ಹಂಟ್

"ಈ ಬಾರಿ ಮೈಸೂರಿನಲ್ಲಿ ಕೆಸಿಸಿ ಸೀಸನ್ 3 ನಡೆಯಲಿದೆ. ಸೆಪ್ಟೆಂಬರ್‌ 6, 7 ಮತ್ತು 8 ರಂದು ಪಂದ್ಯಾವಳಿ ಇರುತ್ತದೆ. ಕೆಸಿಸಿ ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ" ಎಂದು ಹೇಳಿಕೊಂಡಿದ್ದಾರೆ ಸುದೀಪ್. ಒಟ್ಟಾರೆ 10 ಓವರ್ ಗಳ ಪಂದ್ಯದಲ್ಲಿ ಈ ಬಾರಿ ಪ್ರತಿ ತಂಡ ಒಟ್ಟು ಐದು ಪಂದ್ಯಗಳನ್ನು ಆಡಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆ. ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳ ಒಟ್ಟು ಆರು ತಂಡಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಲಿವೆ.

Karnataka Chalanachithra Cup Season 3 Cricket League

ಕಳೆದ ಬಾರಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ನಟ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಗೋಲ್ಡನ್ ‍ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಆರು ತಂಡಗಳು ಆಟವಾಡಿದ್ದವು. ಈ ಬಾರಿ ಕೆಸಿಸಿ ಟಿ-10 ಕ್ರಿಕೆಟ್‌ ಲೀಗ್‌ನಲ್ಲಿ ಸಿಸಿಎಲ್ ಮತ್ತು ಕೆಪಿಎಲ್ ಆಟಗಾರರೂ ಆಡಲಿರುವುದು ವಿಶೇಷ. ಈ ಲೀಗ್‌ನ ತಂಡಗಳಲ್ಲಿ ಕಲಾವಿದರೊಂದಿಗೆ ಬರಹಗಾರರು, ತಂತ್ರಜ್ಞರು ಕೂಡ ಆಡುತ್ತಿದ್ದಾರೆ.

English summary
2019 Karnataka Film Cup tournment will be held in the cultural city Mysore this time. Actor Sudeep announced on Twitter that the KCC third edition matches will be held in the city on September 6, 7 and 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X