ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳುವುದೇ?
ಮೈಸೂರು, ನವೆಂಬರ್.20: ರಾಜಕಾರಣದಲ್ಲಿ ಯಾರು ಶತ್ರುಗಳೂ ಅಲ್ಲ. ಯಾರು ಮಿತ್ರರೂ ಅಲ್ಲ. ಇಲ್ಲಿ ಯಾವಾಗ ಯಾರು ಯಾವ ಪಕ್ಷದಲ್ಲಿ ಇರುತ್ತಾರೋ ಗೊತ್ತಾಗಲ್ಲ. ಯಾರು ಯಾವಾಗ ಯಾರ ಮಾತನಾಡುತ್ತಾರೆ ಅನ್ನೋದೂ ತಿಳಿಯಲ್ಲ. ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತಿನ ಧಾಟಿಯೂ ಹಾಗೆ ಇತ್ತು.
Recommended Video
ಬಾಯಿ ತೆರೆದರೆ ವಿರೋಧಿಗಳ ವಿರುದ್ಧ ಹರಿ ಹಾಯುತ್ತಿದ್ದ ಕುಮಾರಸ್ವಾಮಿ ಇವತ್ತು ಫುಲ್ ಸಾಫ್ಟ್ ಆಗಿ ಬಿಟ್ಟಿದ್ದರು. ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದರು. ಜೊತೆ ಜೊತೆಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಕಿಡಿ ಕಾರಿದರು.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಪರ ಮೃದು ಧೋರಣೆ ತೋರಿದರು. ರಾಜಕಾರಣದಲ್ಲಿ ಸಾಲ ನೀಡುವುದು, ಸಾಲ ಪಡೆಯುವುದೆಲ್ಲ ಸಹಜ. ಇದರ ಬಗ್ಗೆ ಟೀಕೆ ಮಾಡುವುದು ಯಾರಿಗೂ ತರವಲ್ಲ. ಈಗ ಆ ಬಗ್ಗೆ ಮಾತನಾಡುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.
ಸಿದ್ದುಗೆ ಮಾತಿನ ಗುದ್ದು ಕೊಟ್ಟಿದ್ದ ಎಂಟಿಬಿ
ಹೊಸಕೋಟೆ ಅಖಾಡಕ್ಕೆ ಧುಮುಕಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದ್ದರು. ಈಗ ನನ್ನ ವಿರುದ್ಧ ಮಾತನಾಡುತ್ತಿರುವ ನಾಯಕರೆಲ್ಲ ಒಂದು ಕಾಲದಲ್ಲಿ ನನ್ನಿಂದಲೇ ಹಣ ಪಡೆದುಕೊಂಡಿದ್ದರು ಎಂದು ಟೀಕಿಸಿದ್ದರು.