ಜೂನ್ ಆರಂಭದಲ್ಲಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ?!
ಮೈಸೂರಿನಲ್ಲಿ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್ ಮೊದಲನೆಯ ವಾರದಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮೈಸೂರು, ಮಾರ್ಚ್ 22 : ಉಪಚುನಾವಣೆಯ ಕಾವು ಒಂದೆಡೆಯಾದರೆ, ಕನ್ನಡ ಸಾಹಿತ್ಯ ಸಮ್ಮೇಳನದ ತಂಪು ಇನ್ನೊಂದೆಡೆ. ಹೌದು, ಸಾಂಸ್ಕೃತಿಕ ನಗರಿ ಮೈಸೂರು 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಜ್ಜಾಗುತ್ತಿದೆ.
ಇದೇ ಜೂನ್ ಮೊದಲನೆಯ ವಾರದಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಅವರು ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ವೇಳೆ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಜಿಲ್ಲಾ ಕಸಾಪ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ಪಡೆದ ನಂತರ ಜೂನ್ ಮೊದಲನೆಯ ವಾರದಲ್ಲಿ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.[ರಾಯಚೂರು ಕನ್ನಡ ಸಾಹಿತ್ಯ ಸಮ್ಮೇಳನ : ಬರಗೂರು ಭಾಷಣದ ಮುಖ್ಯಾಂಶಗಳು]
ಮುಖ್ಯಮಂತಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಜೂನ್ ಮೊದಲ ವಾರದಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಚರ್ಚೆ ಮಾಡುವ ಕುರಿತಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೂನ್ ಎರಡನೆಯ ವಾರದಲ್ಲಿ ಮಳೆಗಾಲ ಆರಂಭವಾಗಲಿರುವುದರಿಂದ ಹಾಗೂ ಶಾಲಾ/ ಕಾಲೇಜುಗಳು ಸಹ ಮೊದಲನೆಯ ವಾರವೇ ಪ್ರಾರಂಭವಾಗಲಿರುವುದರಿಂದ ಸಮ್ಮೇಳನಕ್ಕೆ ಆ ಸಮಯವೇ ಸೂಕ್ತ ಎಂದು ತೀರ್ಮಾನಿಸಲಾಗಿದೆ. ಕಳೆದ ಬಾರಿಯ ಸಾಹಿತ್ಯ ಸಮ್ಮೇಳನ ಡಿಸೆಂಬರ್ ತಿಂಗಳಿನಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ನಡೆದಿತ್ತು.[ರಾಯಚೂರಿನಲ್ಲಿ ಕನ್ನಡ ಹಬ್ಬ ಸಹೃದಯರಿಗೇನೇನಿದೆ?]
ವಸ್ತು
ಪ್ರದರ್ಶನ
ಆವರಣದಲ್ಲಿ
ಸಮ್ಮೇಳನ
?
83
ನೆಯ
ಅಖಿಲ
ಭಾರತ
ಕನ್ನಡ
ಸಾಹಿತ್ಯ
ಸಮ್ಮೇಳನವನ್ನು
ದಸರಾ
ವಸ್ತು
ಪ್ರದರ್ಶನ,
ಆವರಣ
ಅಥವಾ
ಮಹಾರಾಜ
ಕಾಲೇಜಿನ
ಗ್ರೌಂಡ್
ನಲ್ಲಿ
ನಡೆಸಲು
ತೀರ್ಮಾನಿಸಲಾಗಿದೆ.
ಇನ್ನು
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಅರಮನೆ
ಮುಂಭಾಗ
ಹಾಗೂ
ಪರ್ಯಾಯ
ಗೋಷ್ಠಿಗಳನ್ನು
ಜಗನ್ಮೋಹನ
ಅರಮನೆ
ಹಾಗೂ
ಪುರಭವನ
ವೇದಿಕೆಗಳಲ್ಲಿ
ಆಯೋಜಿಸಲು
ಮೊದಲ
ಸುತ್ತಿನ
ಮಾತುಕತೆ
ನಡೆಸಲಾಗಿದೆ
ಎನ್ನಲಾಗಿದೆ.
ಸ್ಥಳೀಯರಿಗೆ
ಹೆಚ್ಚಿನ
ಆದ್ಯತೆ
ಇನ್ನು
ಸಾಹಿತ್ಯಾಸಕ್ತಿಯುಳ್ಳ
ಯುವಕರನ್ನು
ನೇಮಿಸಿ
ಅವರನ್ನು
ಸ್ವಯಂ
ಸೇವಕರನ್ನಾಗಿಸುವತ್ತ
ಹೆಚ್ಚು
ಒತ್ತು
ನೀಡಲಾಗುತ್ತಿದೆ.
ಅಲ್ಲದೇ
ಮೈಸೂರಿನ
ಸುತ್ತಮುತ್ತಲ
ಜಿಲ್ಲೆಗಳಾದ
ಮಂಡ್ಯ,
ಚಾಮರಾಜಗನಗರ,
ಹಾಸನದಲ್ಲಿ
ಅಕ್ಷರ
ರಥ
ಸಂಚರಿಸುವಂತೆ
ಮಾಡಬೇಕೆಂದು
ಸಹ
ಅಧಿಕಾರಿಗಳಿಗೆ
ಸೂಚನೆ
ನೀಡಲಾಗಿದೆ.[82ನೇ
ಸಾಹಿತ್ಯ
ಸಮ್ಮೇಳನ
ಅಧ್ಯಕ್ಷರಾಗಿ
ಬರಗೂರು
ಆಯ್ಕೆ]
ಜಿಲ್ಲಾಧಿಕಾರಿಗಳಿಗೆ
ಆಹ್ವಾನ:
ಇದೇ
ವೇಳೆ
83ನೆಯ
ಅಖಿಲ
ಭಾರತ
ಕನ್ನಡ
ಸಾಹಿತ್ಯ
ಸಮ್ಮೇಳನಕ್ಕೆ
ಸಂಪೂರ್ಣ
ಸಹಕಾರ
ನೀಡಿ
ಸಮ್ಮೇಳನದ
ಯಶಸ್ಸಿಗೆ
ಬೆಂಬಲವಾಗಿ
ನಿಲ್ಲುವಂತೆ
ಜಿಲ್ಲಾ
ಕಸಪಾ
ಅಧ್ಯಕ್ಷ
ಡಾ.ವೈ.ಡಿ.ರಾಜಣ್ಣ
ನೇತೃತ್ವದಲ್ಲಿ
ಪದಾಧಿಕಾರಿಗಳು
ಜಿಲ್ಲಾಧಿಕಾರಿ
ಡಿ.
ರಂದೀಪ್ರಿಗೆ
ಸಾಂಪ್ರದಾಯಿಕವಾಗಿ
ಗೌರವ
ಸಮರ್ಪಿಸಿ
ಮನವಿ
ಮಾಡಿದರು.
ಒಟ್ಟಾರೆ
ಈ
ಬಾರಿ
ಅಕ್ಷರ
ಜಾತ್ರೆಯ
ಸೊಗಡು
ಮೈಸೂರಿನಲ್ಲಿ
ಹೇಗೆ
ಕಳೆಗಟ್ಟಲಿದೆ
ಎನ್ನುವುದನ್ನು
ಕಾದುನೋಡಬೇಕಿದೆ.