ಮೈಸೂರು: ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಕನ್ನಡ ತೇರು
ಮೈಸೂರು, ನವೆಂಬರ್ 11 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳು ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಜಿಲ್ಲೆಯಾದ್ಯಂತ ಸಂಚರಿಸಲಿರುವ ಕನ್ನಡ ತೇರು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳ ನೋಂದಣಿ ಕಚೇರಿಯನ್ನು ಉದ್ಘಾಟಿಸುವ ಮೂಲಕ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಜ್ಜಾಗುತ್ತಿದೆ ಮಲ್ಲಿಗೆ ಸಾರೋಟು!
ಇದೇ ವೇಳೆ ಮಾತನಾಡಿದ ಅವರು , ಮೈಸೂರಿನಲ್ಲಿ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದುವರೆಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ 7575 ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಪುರುಷರು 4982 ,ಹಾಗೂ ಮಹಿಳೆಯರು 1793 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ.
83 ನೇ ಸಾಹಿತ್ಯ ಸಮ್ಮೇಳನ ನಿಮಿತ್ತ ನಗರಕ್ಕೆ ಮತ್ತೆ ದೀಪಾಲಂಕಾರ !
ರಾಜ್ಯದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಲ್ಲಿ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳುವವರ ಅವಧಿ ನವೆಂಬರ್ 10 ರಂದು ಮುಕ್ತಾಯಗೊಂಡಿದೆ. ಸ್ಥಳೀಯರಿಗೆ ಹೆಚ್ಚಿನ ಅವಕಾಶ ಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರಗೆ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿಯಾದವರಿಗೆ ಬ್ಯಾಗ್, ಪೆನ್ನು, ಪುಸ್ತಕ, ಆಹಾರ ಕೂಪನ್ ನೀಡಲಾಗುವುದು ಎಂದರು.
ಸಮ್ಮೇಳನದ
ದಿನ
ಒತ್ತಡ
ಕಡಿಮೆ
ಮಾಡಲು
ಈ
ಕಚೇರಿಯನ್ನು
ಉದ್ಘಾಟಿಸಲಾಗಿದೆ.
ಎಲ್ಲರು
ಒಗ್ಗೂಡಿ
ಕನ್ನಡ
ಸಾಹಿತ್ಯ
ಸಮ್ಮೇಳನದ
ತೇರನ್ನು
ಎಳೆಯೋಣ
ಎಂದರು.
ಇದಾದ
ನಂತರ
ಮಹಾರಾಜ
ಕಾಲೇಜು
ಮೈದಾನದಲ್ಲಿ
ಜಿಲ್ಲೆಯಾದ್ಯಂತ
ಸಂಚರಿಸುವ
ಕನ್ನಡ
ತೇರಿಗೆ
ಚಾಲನೆ
ನೀಡಿದರು.
ಅಮ್ಮೇಳನದ
ಕಾರ್ಯಕ್ರಮಕ್ಕೆ
ಗುದ್ದಲಿ
ಪೂಜೆ
ನೆರವೇರಿಸಿದರು.
ಇದೇ
ಸಂದರ್ಭ
ಸಚಿವ
ತನ್ವೀರ್
ಸೇಠ್,ಕ.ಸಾ.ಪ
ಅಧ್ಯಕ್ಷ
ವೈ.ಡಿ.ರಾಜಣ್ಣ,
ಮೈಲಾಕ್
ಅಧ್ಯಕ್ಷ
ವೆಂಕಟೇಶ್,
ಮೃಗಾಲಯ
ಪ್ರಾಧಿಕಾರದ
ಅಧ್ಯಕ್ಷೆ
ಮಲ್ಲಿಗೆ
ವೀರೇಶ್,ಶಾಸಕ
ವಾಸು,ಹಿಂದುಳಿದ
ವರ್ಗಗಳ
ಜಿಲ್ಲಾಧಿಕಾರಿ
ಸೋಮಶೇಖರ್
ಹಾಜರಿದ್ದರು.