ರಾಜ್ಯಕ್ಕೆ ಬಂದ ಕೇರಳ ತ್ಯಾಜ್ಯ, ಲಾರಿ ತಡೆದ ಕನ್ನಡ ಸಂಘಟನೆಗಳು
ಮೈಸೂರು, ಜನವರಿ 18: ನಾಗರೀಕರು, ಸಂಘ ಸಂಸ್ಥೆಗಳ ಪ್ರತಿರೋಧದ ನಡುವೆಯೂ ಕೇರಳ ರಾಜ್ಯದಿಂದ ತ್ಯಾಜ್ಯಗಳನ್ನು ಲಾರಿಯಲ್ಲಿ ತಂದು ಕರ್ನಾಟಕದೊಳಗೆ ಸುರಿಯುತ್ತಿರುವ ದಂಧೆ ನಿರಂತರವಾಗಿ ಸಾಗಿದ್ದು, ತ್ಯಾಜ್ಯ ತರುವ ಲಾರಿಗಳಿಗೆ ತಡೆಯೊಡ್ಡುವ ಕಾರ್ಯಾಚರಣೆಯನ್ನು ಕನ್ನಡ ಪರ ಸಂಘಟನೆಗಳು ಮುಂದುವರಿಸಿವೆ.
ತ್ಯಾಜ್ಯಕ್ಕೆ ಬೆಂಕಿ ಹಚ್ಚಿದರೆ 22 ಕಾಯಿಲೆಗಳು ಬರುವುದು ಗ್ಯಾರಂಟಿ!
ನಿನ್ನೆ ಮತ್ತು ಇಂದು ಕೇರಳದಿಂದ ತ್ಯಾಜ್ಯವನ್ನು ತುಂಬಿರುವ 2 ಲಾರಿಗಳು ಕರ್ನಾಟಕದೊಳಗೆ ಬರುವ ಮಾಹಿತಿ ದೊರಕಿದ ತಕ್ಷಣ ಕಾರ್ಯ ಪ್ರವೃತ್ತರಾದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಪಟ್ಟಣ ಸಮೀಪದ ಊಟಿ ವೃತ್ತದಲ್ಲಿ 9 ಗಂಟೆಗೆ ಲಾರಿಗಳನ್ನು ತಡೆದಿದ್ದಾರೆ.
ನಂತರ ಕಾರ್ಯಕರ್ತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಸುರೇಶ್, ಕಾವಲು ಪಡೆಯ ಅಬ್ದುಲ್ ಮಾಲಿಕ್ ಹಾಗೂ ಸಂಘಟನೆಗಳ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.