ಮೈಸೂರಿನಲ್ಲಿ ಐಐಟಿ ಸ್ಥಾಪನೆ, ಕೇಂದ್ರದ ತಂಡ ನಗರಕ್ಕೆ ಭೇಟಿ
ಮೈಸೂರು, ಆ.27 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಲಿದೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮೈಸೂರಿನಲ್ಲಿ ಐಐಟಿ ಸ್ಥಾಪನೆ ಮಾಡಲು ಲಭ್ಯವಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲು ಕೇಂದ್ರದ ತಂಡ ಇಂದು ನಗರಕ್ಕೆ ಭೇಟಿ ನೀಡಲಿದೆ.
ಕರ್ನಾಟಕ
ಸರ್ಕಾರ
ಮೈಸೂರು,
ಹುಬ್ಬಳ್ಳಿ-ಧಾರವಾಡ
ಮತ್ತು
ರಾಯಚೂರು
ಜಿಲ್ಲೆಗಳಲ್ಲಿ
ಐಐಟಿ
ಸ್ಥಾಪನೆ
ಮಾಡಬಹುದು
ಎಂದು
ಕೇಂದ್ರ
ಸರ್ಕಾರಕ್ಕೆ
ಪ್ರಸ್ತಾವನೆ
ಸಲ್ಲಿಸಿದೆ.
ಮೂರು
ಜಿಲ್ಲೆಗಳಲ್ಲಿ
ಲಭ್ಯವಿರುವ
ಸೌಲಭ್ಯಗಳ
ಕುರಿತು
ಪರಿಶೀಲನೆ
ನಡೆಸಲು
ಕೇಂದ್ರದ
ತಂಡ
ರಾಜ್ಯಕ್ಕೆ
ಆಗಮಿಸಿದೆ.
[ಮೈಸೂರಲ್ಲಿ
ಐಐಟಿ
:
ಪ್ರತಾಪ್
ಸಿಂಹ,
ಸ್ಮೃತಿ
ಇರಾನಿ
ಭೇಟಿ]
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಬ್ರಹ್ಮಣ್ಯಂ ನೇತೃತ್ವದ ತಂಡ, ಆ.27ರ ಗುರುವಾರ ಮೈಸೂರಿಗೆ ಭೇಟಿ ನೀಡಲಿದೆ. ಮೈಸೂರಿನಲ್ಲಿ ಐಐಟಿ ಸ್ಥಾಪನೆಗೆ ಲಭ್ಯವಿರುವ ಸೌಲಭ್ಯಗಳನ್ನು ಜಿಲ್ಲಾಧಿಕಾರಿ ಸಿ.ಶಿಖಾ ಅವರು ವಿವರಿಸಲಿದ್ದಾರೆ. ತಂಡಕ್ಕೆ 52 ಪುಟಗಳ ವರದಿಯನ್ನು ನೀಡಲಿದ್ದಾರೆ. [ಐಐಟಿ : 3 ಜಿಲ್ಲೆಗಳತ್ತ ಬೊಟ್ಟು ತೋರಿಸಿದ ಸಿದ್ದರಾಮಯ್ಯ]
ತಾತ್ಕಾಲಿಕ ಸ್ಥಳ ನಿಗದಿ : ಐಐಟಿ ಸ್ಥಾಪನೆ ಮಾಡಲು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಸುಮಾರು 6 ಕಿ.ಮೀ.ದೂರದಲ್ಲಿರುವ ಸ್ಥಳವನ್ನು ಗುರುತಿಸಲಾಗಿದೆ. ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತಾಂಡವಪುರದಲ್ಲಿ ತಾತ್ಕಾಲಿಕವಾಗಿ ಐಐಟಿ ಸ್ಥಾಪಿಸಬಹುದು ಎಂದು ಜಿಲ್ಲಾಡಳಿತ ಕೇಂದ್ರದ ತಂಡಕ್ಕೆ ವಿವರಣೆ ನೀಡಲಿದೆ.[ಐಐಟಿ ಸ್ಥಾಪನೆಗೆ ಒತ್ತಾಯಿಸಿ ರಾಯಚೂರು ಬಂದ್]
ಶಾಶ್ವತ ಸ್ಥಳ : ಐಐಟಿಯನ್ನು ಶಾಶ್ವತವಾಗಿ ಸ್ಥಾಪಿಸಲು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಳವನ್ನು ಜಿಲ್ಲಾಡಳಿತ ಗುರುತಿಸಿದೆ. ಸುಮಾರು 499 ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಪ್ರದೇಶದ ಕುರಿತ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ತಂಡಕ್ಕೆ ನೀಡಲಿದ್ದಾರೆ.