ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರು ಗೆಲ್ತಾರೆ ನೋಡೇಬಿಡೋಣ: ವಿ.ಶ್ರೀನಿವಾಸ್ ಪ್ರಸಾದ್

By ಮೈಸೂರು ಪ್ರತಿನಿಧಿ
|
Google Oneindia Kannada News

ನಂಜನಗೂಡು, ಮಾರ್ಚ್. 10 : ನಂಜನಗೂಡು ಉಪಚುನಾವಣೆಯಲ್ಲಿ ನನ್ನದು ಪಂಥಾಹ್ವಾನ. ಸಿಎಂ ಸಿದ್ದರಾಮಯ್ಯ ಅವರದ್ದು ಬರಿ ಪಲಾಯನವಾದ ಎಂದು ಮೈಸೂರಿನಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಕಳೆದುಕೊಂಡು, ಬಂಡಾಯವೆದ್ದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ ವಿ. ಶ್ರೀನಿವಾಸ್ ಪ್ರಸಾದ್ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಈ‌ ಮಾತನ್ನು ಹೇಳಿದರು.

I will take Najanagoodu Constituency as a challenge: V.Shrinivas Prasad

ಈ ಉಪಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆ ದಿಕ್ಸೂಚಿಯಾಗಲಿದೆ. ಅವರು ಚುನಾವಣೆ ಮುಗಿಯಲಿ ಅಂತ ಹೇಳಿದ್ದಾರೆ. ನಾನೂ ಅದನ್ನೇ ಹೇಳುತ್ತೇನೆ. ಚುನಾವಣೆ ಮುಗಿಯಲಿ ಯಾರು ಗೆಲ್ತಾರೆ ಅಂತ ತಿಳಿಯಲಿದೆ.

ನಾನು ಕಿವುಡ ಮೂಗ ಶಾಲೆಯ ಮೇಷ್ಟ್ರಲ್ಲ. ನನಗೂ ಮಾತನಾಡಲು ಬರುತ್ತೆ, ಪಾಠ ಮಾಡೋಕೂ ಬರುತ್ತೆ ಎಂದಿರುವ ಅವರು ಎಪ್ರಿಲ್ ೯ ರಂದು ನಡೆಯಲಿರುವ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

English summary
I will take Najanagoodu Constituency as a challenge, former minister V.Shrinivas Prasad, who recently joined BJP told. He was talking in a function held in JSS Hospital in mysore today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X