ಉಂಡು ಹೋದ, ಕೊಂಡು ಹೋದ.. ಬಿಟ್ಟೂ ಹೋದ
ಮೈಸೂರು, ಮೇ 08 : ಉಂಡು ಹೋದ, ಕೊಂಡು ಹೋದ ಗಾದೆಗೆ ಮತ್ತೊಂದು ಸೇರ್ಪಡೆ ಮಾಡಿಕೊಳ್ಳಬಹುದು. ಉಂಡು ಹೋದ, ಕೊಂಡು ಹೋದ ಜತೆಗೆ ಬಿಟ್ಟು ಹೋದ...
ನಾನು ಭೂಕಂಪ ಸಂತ್ರಸ್ತ, ನನ್ನವರು ಯಾರೂ ಇಲ್ಲ, ಹೆಣ್ಣು ಕೊಟ್ಟರೆ ಮನೆ ಅಳಿಯನಾಗಿ ಜವಾಬ್ದಾರಿ ನಿರ್ವಹಿಸಿಕೊಂಡು ಇರುತ್ತೇನೆ ಎಂದು ಜಾಹೀರಾತು ನೀಡಿದ ಭೂಪನಿಗೆ ಮದುವೆಯೂ ಆಯಿತು. ಜತೆಗೆ ಸಾಕಷ್ಟು ಹಣ, ಚಿನ್ನಾಭರಣಗಳನ್ನೂ ನೀಡಲಾಯಿತು. ಹೆಂಡತಿಯನ್ನು ಮಧುಚಂದ್ರಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೋದವ ಮಾರ್ಗ ಮಧ್ಯೆ ಹೆಂಡತಿಯನ್ನು ಬಿಟ್ಟು ಚಿನ್ನಾಭರಣದ ಜತೆಗೆ ಪರಾರಿಯಾಗಿದ್ದಾನೆ.[ತಂದೆ ಹಕ್ಕಿಗೆ ವಿಚ್ಛೇದಿತ ಗಂಡಂದಿರ ಉಪವಾಸ ಸತ್ಯಾಗ್ರಹ]
ಸಯ್ಯದ್ ರಿಜ್ವಾನ್ ಅಲಿ(37) ಪರಾರಿಯಾದ ಪರಾರಿಯಾದವ. ಮೈಸೂರಿನ ಬನ್ನಿಮಂಟಪದ ಸಿ ಬಡಾವಣೆ ನಿವಾಸಿ ಸಯ್ಯದ್ ಯಾಕುಬ್ ಸಯಿದ್ ಅವರ ಸಹೋದರಿಯನ್ನು ವಿವಾಹವಾಗಿದ್ದವನ ಮೇಲೆ ಇದೀಗ ವಂಚನೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಉರ್ದು ದಿನಪತ್ರಿಕೆಯಲ್ಲಿ ಫೆ. 10ರಂದು ವಧು ಬೇಕಾಗಿದೆ ಎಂದು ರಿಜ್ವಾನ್ ಅಲಿ ಜಾಹೀರಾತು ನೀಡಿದ. ಇದನ್ನು ಗಮನಿಸಿದ ಸಯ್ಯದ್ ಯಾಕುಬ್ ಸಯೀದ್ ಆತನನ್ನು ಸಂಪರ್ಕಿಸಿ ತಮ್ಮ ಸಹೋದರಿಯನ್ನು ವಿವಾಹವಾಗುವಂತೆ ಕೋರಿದರು. 2 ಲಕ್ಷ ನಗದು ಮತ್ತು ವಧುವಿಗೆ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕೊಟ್ಟು ಮದುವೆ ಮಾಡಿಕೊಡುವುದಾಗಿ ತಿಳಿಸಲಾಯಿತು. ಏ. 20ರಂದು ವಿವಾಹವೂ ನಡೆಯಿತು.[ಬಲವಂತ ಸಂಭೋಗ, ರೇಪ್ ಅಲ್ಲ: ಕೋರ್ಟ್]
11 ದಿನ ಮಾವನ ಮನೆಯಲ್ಲಿಯೇ ಇದ್ದ ಆರೋಪಿ, ಪತ್ನಿಯೊಂದಿಗೆ ಮಧುಚಂದ್ರಕ್ಕೆ ತೆರಳಲು ಸಿದ್ಧತೆ ನಡೆಸಿದ. ಅಲ್ಲದೇ ಬಾವನಿಂದಲೇ ಖರ್ಚಿಗೆಂದು 35 ಸಾವಿರ ರೂ ಪಡೆದುಕೊಂಡ. ಹೆಂಡತಿಯ ಹತ್ತಿರ ಎಲ್ಲ ಒಡೆವೆಗಳನ್ನು ತೆಗೆದುಕೊಳ್ಳುವಂತೆ ಹೇಳಲು ಮರೆಯಲಿಲ್ಲ.[ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?]
ನಂತರ ಕಾಟನ್ ಪೇಟೆಯ ದರ್ಗಾಕ್ಕೆ ಹೋಗಿ ಬರೋಣ ಎಂದು ಹೇಳಿದವ ಹೆಂಡತಿಯನ್ನು ರೈಲ್ವೆ ನಿಲ್ದಾಣದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಮೈಸೂರಿನ ನರಸಿಂಹರಾಜಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.