ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟ್ಟೆಮಳಲವಾಡಿಯಲ್ಲಿ ಪ್ರಿಯಕರ ಮೋಸ ಮಾಡಿದ್ದಕ್ಕೆ ನೇಣಿಗೆ ಶರಣಾದ ಪ್ರಿಯತಮೆ

|
Google Oneindia Kannada News

ಮೈಸೂರು, ಫೆಬ್ರವರಿ 13: ಯುವತಿಯೋರ್ವಳು ತನ್ನ ಪ್ರಿಯಕರ ಮೋಸ ಮಾಡಿದನೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ.

ಇಬ್ಬರು ಮಹಿಳೆಯರಿಂದ ಕಿರುಕುಳ, ಯುವಕ ನೇಣಿಗೆ ಶರಣುಇಬ್ಬರು ಮಹಿಳೆಯರಿಂದ ಕಿರುಕುಳ, ಯುವಕ ನೇಣಿಗೆ ಶರಣು

ಅರ್ಪಿತಾ (19) ಮೃತ ದುರ್ದೈವಿ. ಆಕೆಯ ಪ್ರಿಯತಮನ ಹೆಸರು ಲೋಕೇಶ್ ಗೌಡ(26). ಇವರಿಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಅರ್ಪಿತಾಳನ್ನು ಮದುವೆಯಾಗುವುದಾಗಿ ನಂಬಿಸಿದ್ದ ಲೋಕೇಶ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಕೆಲವು ದಿನಗಳ ಹಿಂದೆ ಮನೆಯಲ್ಲಿ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಯುವತಿಗೆ ಯುವಕ ಮೋಸಗೈದಿದ್ದಾನೆ.

 ತೆಲುಗು ನಟಿಯ ಆತ್ಮಹತ್ಯೆ, ಪ್ರಿಯಕರನ ಕಿರುಕುಳವೇ ಕಾರಣ? ತೆಲುಗು ನಟಿಯ ಆತ್ಮಹತ್ಯೆ, ಪ್ರಿಯಕರನ ಕಿರುಕುಳವೇ ಕಾರಣ?

ಇದರಿಂದ ವಿಚಲಿತಳಾದ ಅರ್ಪಿತಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದರೊಟ್ಟಿಗೆ ತನಗೆ ಮೋಸ ಮಾಡಿದವನಿಗೆ ಜೀವಾವಧಿ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿಕೊಂಡು ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

Girl committed suicide at Kattemalalavadi

ಹಾಗೆಯೇ ನನ್ನ ಸಾವಿಗೆ ಲೋಕೇಶ್ ಗೌಡ ಹೊರತು ಬೇರಾರು ಕಾರಣ ಅಲ್ಲ. ಲೋಕೇಶ್‌ಗೆ ಜೀವಾವಧಿ ಶಿಕ್ಷೆ ಕೊಡಿಸುವಂತೆ ಡೆತ್ ನೋಟ್ ನಲ್ಲಿ ಅರ್ಪಿತಾ ಮನವಿ ಮಾಡಿಕೊಂಡಿದ್ದಾಳೆ. ಸದ್ಯ ಆರೋಪಿ ಪ್ರಿಯಕರ ಪರಾರಿಯಾಗಿದ್ದು, ಹುಣಸೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

English summary
19 year old girl committed suicide at Kattemalalavadi, Mysuru for love failur. The case was registered at Hunsur police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X