ಶ್ರೀರಂಗಪಟ್ಟಣದಲ್ಲಿ ದೆವ್ವದ ಭೀತಿ; ಸದ್ದು ಮಾಡುತ್ತಿರುವ ವಿಡಿಯೋದಲ್ಲೇನಿದೆ?
ಮಂಡ್ಯ , ಸೆಪ್ಟೆಂಬರ್ 11 : ಏನ್ರೀ.. ಈ ಕಾಲದಲ್ಲೂ ದೆವ್ವಾದ ಬಗ್ಗೆ ಸುದ್ದಿ ಬರೀತಿದೀವು ಅಂದುಕೊಂಡ್ರಾ? ಹಾಗೇನಿಲ್ಲ. ಮಂಡ್ಯದಲ್ಲೀಗ ಹುಟ್ಟಿಕೊಂಡು ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಕ್ಕರೆ ನಾಡಿನ ಬೀದಿಗಳಲ್ಲಿ ಮಧ್ಯ ರಾತ್ರಿ ದೆವ್ವ ಓಡಾಡಿದೆ ಎಂಬುದು ಅದರ ಸಾರಾಂಶ.
ತಿಂಗಳ ಮಗು ನಡೆಯುತ್ತಂತೆ, ಬೆಂಕಿ ಉಗುಳುತ್ತಂತೆ!
ಒಂದು ನಿಮಿಷದ ದೆವ್ವದ ವಿಡಿಯೋವನ್ನು ಸೆರೆ ಹಿಡಿದಿರುವ ಯುವಕರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ಬಳಿ ದೆವ್ವ ಪ್ರತ್ಯಕ್ಷ್ಯವಾಗಿದೆ ಎಂದು ಅನೇಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದು ಗ್ರಾಮದ ಹೊರವಲಯ ಕೊಡೊಯಾಲ ಕೊತ್ತತ್ತಿ ರಸ್ತೆಯ ಸೇತುವೆ ಮೇಲೆ ನಿಂತ ಹಾಗೆ ಭಾಸವಾಗುತ್ತದೆ. ವಿಡಿಯೋ ಕಡೆಯಲ್ಲಿ ಮೇಲಕ್ಕೆ ಹೋಗುವಂತೆ ಕಾಣುವ ಭೂತದ ಚಿತ್ರಣವೂ ಆ ಭಾಗದ ಜನರಲ್ಲಿ ಭಯದ ವಾತಾವರಣ ಹುಟ್ಟು ಹಾಕಿದೆ.
ಸದ್ಯ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ವಿಡಿಯೋ ನೋಡಿ ರಾತ್ರಿಯಲ್ಲಿ ಆ ಮಾರ್ಗದಲ್ಲಿ ಸಂಚರಿಸಲು ವಾಹನ ಸವಾರರೇ ಹಿಂಜರಿಯುತ್ತಿದ್ದಾರೆ.
ಇದರಲ್ಲಿ ಎಷ್ಟು ಸತ್ಯಾಂಶ ಇದೆ ಎಂಬುದು ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ ಮತ್ತು ಆ ಮೂಲಕವೇ ಜನರನ್ನು ಭಯದಿಂದ ಮುಕ್ತಗೊಳಿಸಬೇಕಿದೆ.