ಮೈಸೂರು ದಸರಾ 2021; ಸೋಮವಾರ ಗಜಪಯಣಕ್ಕೆ ಚಾಲನೆ
ಮೈಸೂರು, ಸೆಪ್ಟೆಂಬರ್ 12; ಕೋವಿಡ್ ಭೀತಿಯ ನಡುವೆಯೇ ಮೈಸೂರು ದಸರಾ 2021ಕ್ಕೆ ಸಿದ್ಧತೆಗಳು ಆರಂಭವಾಗಿವೆ. ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಗಜ ಪಯಣ ಸೋಮವಾರ ಆರಂಭವಾಗಲಿದೆ.
ಸೆಪ್ಟೆಂಬರ್ 13ರ ಸೋಮವಾರ ಬೆಳಗ್ಗೆ 9.30ಕ್ಕೆ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಭಾದ್ರಪದ ಸಪ್ತಮಿ ದಿನ ಆಗಿರುವುದರಿಂದ ಗಜಪಯಣಕ್ಕೆ ಚಾಲನೆ ನೀಡಲು ಒಳ್ಳೆಯ ದಿನವಾಗಿದೆ.
ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು
ವೀರನಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭನವನಕ್ಕೆ ಗಜಪಡೆ ಆಗಮಿಸಲಿದೆ. ಸೆಪ್ಟೆಂಬರ್ 16ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಅರಮನೆಗೆ ಆನೆಗಳನ್ನು ಕರೆತರಲಾಗುತ್ತದೆ.
ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ
ದಸರಾ ಆನೆಗಳು; ಈ ಬಾರಿಯ ಮೈಸೂರು ದಸರಾದಲ್ಲಿ ಅಭಿಮನ್ಯು, ಗೋಪಾಲಸ್ವಾಮಿ, ಕಾವೇರಿ, ಧನಂಜಯ, ಅಶ್ವತ್ಥಾಮ, ಚೈತ್ರಾ, ಲಕ್ಷ್ಮಿ ಮತ್ತು ವಿಕ್ರಮ ಆನೆಗಳು ಪಾಲ್ಗೊಳ್ಳುತ್ತಿವೆ.
ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!
ಅಕ್ಟೋಬರ್ 15ರಂದು ವಿಜಯದಶಮಿ ಜಂಬೂ ಸವಾರಿ ನಡೆಯಲಿದೆ. 4.36 ರಿಂದ 4.46ರ ನಡುವೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. 5 ರಿಂದ 5.30ರ ಸಮಯದಲ್ಲಿ ಅರಮನೆ ಆವರಣದಲ್ಲಿ ಮಾತ್ರ ಜಂಬೂ ಸವಾರಿ ನಡೆಯಲಿದೆ.
ಸೆಪ್ಟೆಂಬರ್ 8ಕ್ಕೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಕುರಿತಾದ ಕೈಪಿಡಿಯನ್ನು ತಯಾರಿಸಲಾಗಿದೆ. ಆನೆಗಳ ವಯಸ್ಸು, ಶಿಬಿರ ಸೇರಿದಂತೆ ಇತರ ವಿವರಗಳು ಕೈಪಿಡಯಲ್ಲಿದೆ.
ಈ ಬಾರಿಯ ದಸರಾ ಮಹೋತ್ಸವ ಅಕ್ಟೋಬರ್ 7 ರಿಂದ 15ರ ತನಕ ನಡೆಯಲಿದೆ. ಅಕ್ಟೋಬರ್ 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. ಯಾರು ದಸರಾ ಉದ್ಘಾಟಿಸಬೇಕು ಎಂದು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
ದಸರಾದ
ಪ್ರಮುಖ
ಆಕರ್ಷಣೆ
ಜಂಬೂ
ಸವಾರಿ.
ಈ
ಬಾರಿಯೂ
ಅಭಿಮನ್ಯು
ಆನೆ
ಅಂಬಾರಿ
ಹೊರಲಿದೆ.
ಈ
ಬಾರಿ
ಗಜಪಡೆಯಲ್ಲಿ
5
ಗಂಡಾನೆ,
3
ಹೆಣ್ಣಾನೆಗಳಿಗೆ
ಅವಕಾಶ
ನೀಡಲಾಗಿದೆ.
ಇದೇ
ಪ್ರಥಮ
ಬಾರಿಗೆ
34
ವರ್ಷದ
ಅಶ್ವತ್ಥಾಮ
ಆನೆ
ದಸರಾ
ಗಜಪಡೆಯಲ್ಲಿ
ಸ್ಥಾನ
ಪಡೆದಿದೆ.
ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಈ ಬಾರಿಯೂ ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಈ ಬಾರಿ ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆಗಳಿಗೆ ಅವಕಾಶ ನೀಡಲಾಗಿದೆ. ಇದೇ ಪ್ರಥಮ ಬಾರಿಗೆ 34 ವರ್ಷದ ಅಶ್ವತ್ಥಾಮ ಆನೆ ದಸರಾ ಗಜಪಡೆಯಲ್ಲಿ ಸ್ಥಾನ ಪಡೆದಿದೆ.
ದಸರಾದಲ್ಲಿ ಮತ್ತಿಗೋಡು ಶಿಬಿರದ 56 ವರ್ಷದ ಅಭಿಮನ್ಯು. ದುಬಾರಿ ಶಿಬಿರದ 58 ವರ್ಷದ ವಿಕ್ರಮ. ದೊಡ್ಡಹರವೆ ಶಿಬಿರದ 34 ವರ್ಷದ ಅಶ್ವತ್ಥಾಮ. ರಾಮಪುರ ಶಿಬಿರದ 20 ವರ್ಷದ ಲಕ್ಷ್ಮಿ. ರಾಮಪುರ ಶಿಬಿರದ 48 ವರ್ಷದ ಚೈತ್ರ. ದುಬಾರೆ ಶಿಬಿರದ 44 ವರ್ಷದ ಕಾವೇರಿ. ದುಬಾರೆ ಶಿಬಿರದ 43 ವರ್ಷದ ಧನಂಜಯ. ಮತ್ತಿಗೋಡು ಶಿಬಿರದ 38 ವರ್ಷದ ಗೋಪಾಲಸ್ವಾಮಿ ಆನೆಗಳು ಪಾಲ್ಗೊಳ್ಳಲಿವೆ.
ಕ್ಯಾಪ್ಟನ್ ಅಭಿಮನ್ಯು; ಈ ಬಾರಿಯೂ ಸಹ ಚಿನ್ನದ ಅಂಬಾರಿಯನ್ನು 56 ವರ್ಷದ ಅಭಿಮನ್ಯು ಹೊರಲಿದ್ದಾನೆ. ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್. ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದ ಆನೆಗೆ ಅಭಿಮನ್ಯು ಎಂದು ಹೆಸರಿಡಲಾಗಿದೆ.
2012ರಿಂದ ಅಭಿಮನ್ಯು ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. 2015ರ ತನಕ ಕರ್ನಾಟಕ ವಾದ್ಯ ಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಈ ಆನೆ ಎಳೆಯುತ್ತಿತ್ತು. ಕಳೆದ ವರ್ಷದ ದಸರಾದಿಂದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಣೆ ಮಾಡುತ್ತಿದೆ.