ಸದ್ಯದಲ್ಲೇ ವಿಶ್ವನಾಥ್ ಜೆಡಿಎಸ್ ಗೆ: ಎಚ್ ಡಿಕೆ ಸ್ಪಷ್ಟನೆ
ಕಾಂಗ್ರೆಸ್ ಮಾಜಿ ಸಂಸದ ಎಚ್.ವಿಶ್ವನಾಥ್ ಶೀಘ್ರದಲ್ಲೇ ಜೆಡಿಎಸ್ ಸೇರಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಇಂದು ಮೈಸೂರಿನಲ್ಲಿ ಸ್ಪಷ್ಟಪಡಿದಿದ್ದಾರೆ.
ಮೈಸೂರು, ಮೇ 10: ಈಗಾಗಲೇ ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಶೀಘ್ರದಲ್ಲೇ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಂಜನಗೂಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಾಜಿ ಸಂಸದ, ಕಾಂಗ್ರೆಸ್ ನ ಎಚ್.ವಿಶ್ವನಾಥ್ ಸದ್ಯದಲ್ಲೇ ಜೆಡಿಎಸ್ ಸೇರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.['ಹಳ್ಳಿ ಹಕ್ಕಿ' ವಿಶ್ವನಾಥ್ ಜೊತೆ ಸಿದ್ದರಾಮಯ್ಯ 'ಟೂ' ಬಿಟ್ಟಿದ್ದೇಕೆ?]
ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಅವರು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಸಮಯದಲ್ಲಿ ಈ ವಿಷಯ ತಿಳಿಸಿದರು.[ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಬರೆದ ಪತ್ರದಲ್ಲೇನಿದೆ?]
ನಿನ್ನೆ
(ಮೇ
09)
ತಾನೇ
ರಾಜ್ಯ
ಕಾಂಗ್ರೆಸ್
ನೂತನ
ಉಸ್ತುವಾರಿ
ಕೆ.ಸಿ.ವೇಣುಗೋಪಾಲ್
ಅವರಿಗೆ
ಪತ್ರ
ಬರೆದು,
ಮುಖ್ಯಮಂತ್ರಿ
ಸಿದ್ದರಾಮಯ್ಯ
ಮತ್ತು
ಕಾಂಗ್ರೆಸ್
ನ
ಕೆಲ
ನಾಯಕರ
ಬಗ್ಗೆ
ಅಸಮಾಧಾನ
ವ್ಯಕ್ತಪಡಿಸಿದ್ದ
ವಿಶ್ವನಾಥ್
ಜೆಡಿಎಸ್
ಗೆ
ಸೇರುತ್ತಾರೆಂಬ
ವದಂತಿ
ಈ
ಮೊದಲೇ
ಹರಡಿತ್ತು.
ಇದೀಗ
ಕುಮಾರಸ್ವಾಮಿಯವರೇ
ಈ
ಸುದ್ದಿಯನ್ನು
ದೃಢಪಡಿಸಿರುವುದು
ವದಂತಿಗಳಿಗೆ
ತೆರೆ
ಎಳೆದಂತಾಗಿದೆ.