ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಮೊದಲ 56 ಕಿ.ಮೀ ಕಾಮಗಾರಿ ಜುಲೈಗೆ ಪೂರ್ಣ
ಮೈಸೂರು, ಮೇ 06: ಬೆಂಗಳೂರಿನಿಂದ ಮೈಸೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂದಿನ ದಿನಗಳಲ್ಲಿ ಬೇಗನೆ ಮೈಸೂರು ತಲುಪಿಸುವ ಕನಸು ಹತ್ತಿರವಾಗಲಿದೆ. ಬೆಂಗಳೂರಿನಿಂದ ಮೈಸೂರನ್ನು ವೇಗವಾಗಿ ಸಂಪರ್ಕಿಸುವ ಎಕ್ಸ್ಪ್ರೆಸ್ ವೇ ಹೆದ್ದಾರಿಯ ಹಾಗೆ ಮೆಗಾ ಹೆದ್ದಾರಿ ಲೇನ್ 10ರ ಒಟ್ಟು 56 ಕಿಲೋಮಿಟರ್ ಕಾಮಗಾರಿಯು ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ.
ಈ ಬಗ್ಗೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮೇಲ್ಸೇತುವೆಗೆ ಭೇಟಿ ನೀಡಿದ್ದು, ಈ ಹೆದ್ದಾರಿಯ ಪ್ರಗತಿ ಪರಿಶೀಲನೆ ನಡೆಸಿ ವೀಡಿಯೋವನ್ನು ಸಾರ್ವಜನಿಕರಿಗೆ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಎರಡು ಮಹಾನಗರದ ಜನತೆಗೆ ಈ ಮೆಗಾ ಹೆದ್ದಾರಿಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲತೆ ಆಗಲಿದೆ. ಕರ್ನಾಟಕದ ನಿವಾಸಿಗಳು ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ ಮೆಗಾ 10-ಲೇನ್ ಹೆದ್ದಾರಿಯ ಪೂರ್ಣಗೊಳ್ಳುವಿಕೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.
10 ಲೇನ್ ಹೈವೇ : ಬೆಂಗಳೂರಿನಿಂದ ನಿಡಘಟ್ಟದವರೆಗಿನ ರೋಡು ಜುಲೈನಲ್ಲೇ ಕಂಪ್ಲೀಟ್ ಆಗುತ್ತಾ?#MysuruBengaluruExpressway #10laneHighway #Mysuru #Bengaluru pic.twitter.com/BUTzdNbJVZ
— Pratap Simha (@mepratap) May 3, 2022
ಸಂಸದ ಪ್ರತಾಪ್ ಸಿಂಹ ಸಾರ್ವಜನಿಕರಿಗೆ ಭರವಸೆ ನಿಡಿದ್ದು ಈ 117 ಕಿಮೀ ಉದ್ದದ ಹೆದ್ದಾರಿಯಲ್ಲಿ (ಬೆಂಗಳೂರಿನಿಂದ ನಿಡಘಟ್ಟವರೆಗೆ) ಮೊದಲ ಒಟ್ಟು 56 ಕಿಮೀ ಮೆಗಾ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಹಾಗೂ ಜುಲೈ ಆರಂಭದ ವೇಳೆ ನಿರೀಕ್ಷೆ ಇದೆ. ಮೈಸೂರು ಬೆಂಗಳೂರು ಎರಡು ನಗರಗಳ ನಡುವಿನ ಪ್ರಯಾಣಿಸುವ ಸಮಯವನ್ನು 3 ಗಂಟೆಗಳಿಂದ ಕೇವಲ 90 ನಿಮಿಷಗಳವರೆಗೆ ಕಡಿತಗೊಳಿಸುವ ನಿರೀಕ್ಷೆಯಿದೆ. 2019ರಲ್ಲಿ ಘೋಷಿಸಲಾದ ಈ ಯೋಜನೆಯು ಅಕ್ಟೋಬರ್ 2022ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಈಗಾಗಲೇ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ ಎಂದ ಸಂಸದ ಪ್ರತಾಪ್ ಸಿಂಹ, ಭರದಿಂದ ಸಾಗುತ್ತಿರುವ ರಸ್ತೆಯ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ನಿರ್ಮಾಣದ ಪ್ರಗತಿಯನ್ನು ಸಾರ್ವಜನಿಕರಿಗೆ ವೀಕ್ಷಿಸಲು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ.
"ಬೆಂಗಳೂರು ಮತ್ತು ಮೈಸೂರು ನಡುವಿನ ಹೊಸ 10-ಲೇನ್ ಹೆದ್ದಾರಿಯನ್ನು 2022ರ ದಸರಾ ಒಳಗೆ ಪೂರ್ಣಗೊಳಿಸಲಾಗುವುದು ಎಂದು ನಾನು ಹೇಳುತ್ತಿದ್ದೇನೆ ಆದರೆ ನೀವು ನನ್ನನ್ನು ನಂಬುತ್ತಿಲ್ಲ" ಎಂದು ಸಂಸದರು ಯೋಜನೆಯ ಪ್ರಗತಿ ವರದಿಯ ದೃಶ್ಯಗಳನ್ನು ಹಂಚಿಕೊಂಡರು.
ಸಂಸದ ಪ್ರತಾಪ್ ಸಿಂಹ ಮತ್ತು ರಸ್ತೆ ಯೋಜನೆಯ ಇಂಜಿನಿಯರ್ಗಳು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಬಳಿಯ 4.5-ಕಿಮೀ ಕುಂಬಳಗೋಡು ಮೇಲ್ಸೇತುವೆಗೆ ಭೇಟಿ ನೀಡಿದರು. ಟೋಲ್ ಪಾಯಿಂಟ್ ಪೂರ್ಣಗೊಳ್ಳುವವರೆಗೆ ಸಂಪೂರ್ಣ ವಿಸ್ತರಣೆಯಾಗಿದೆ ಎಂದು ಹೇಳಿದರು. ಟ್ರಾಫಿಕ್ ದಟ್ಟಣೆ ತಪ್ಪಿಸಲು ಮಾರ್ಗದ ಪ್ರತಿ ಟೋಲ್ ಪ್ಲಾಜಾದಲ್ಲಿ 11 ಪ್ರವೇಶ ಕೇಂದ್ರಗಳನ್ನು ಹೊಂದಿದ್ದು, ಬೆಂಗಳೂರಿಗೆ ಬರುವ ಮತ್ತು ಹೋಗುವ ವಾಹನಗಳಿಗೆ ವಿವಿಧ ಸ್ಥಳಗಳಲ್ಲಿ ಟೋಲ್ ಇರುತ್ತದೆ ಎಂದು ತಿಳಿಸಿದರು.
ಹೊಸ ಹೆದ್ದಾರಿಯು ಬಿಡದಿ ಬೈಪಾಸ್ ಬಳಿ ರೈಲ್ವೆ ಹಳಿ ಮೇಲೆ ಹಾದು ಹೋಗುತ್ತಿದ್ದಂತೆ 650 ಟನ್ ತೂಕದ ವಿಶೇಷ ಕವಚವನ್ನು ಅಳವಡಿಸಲಾಗಿದ್ದು, ಇದರಿಂದ ಸಂಚಾರ ಸುಗಮವಾಗಿ ಮತ್ತು ಹಳಿಗಳ ಮೇಲೆ ಅಡೆತಡೆಯಿಲ್ಲದೆ ಚಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಮೆಗಾ ಹೆದ್ದಾರಿಯು ಸುಗಮ ಪ್ರಯಾಣವನ್ನು ಸುಗಮಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಹಲವು ಹಂತಗಳಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ, ತಿರುವುಗಳು, ಒರಟು ರಸ್ತೆಗಳು ಮತ್ತು ಇತರ ಅಂಶಗಳಿಂದಾಗಿ ಪ್ರಯಾಣಿಕರು ಅನೇಕ ಟ್ರಾಫಿಕ್ ದೌರ್ಬಲ್ಯಗಳನ್ನು ಎದುರಿಸುತ್ತಾರೆ. ಹೀಗೆ ಅನೇಕ ರಸ್ತೆ ಕಾಮಗಾರಿಯ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ವೀಡಿಯೋದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿದ್ದ ಭಯವನ್ನು ನಿವಾರಿಸಿದ್ದಾರೆ.
ಬೆಂಗಳೂರಿನಿಂದ ನಿಡಘಟ್ಟವರೆಗಿನ (56 ಕಿ.ಮೀ) ಮಾರ್ಗವನ್ನು ಜುಲೈನಲ್ಲಿ ಪ್ರಾರಂಭಿಸಲಾಗುವುದು. ಆದರೆ ನೀವು ರಸ್ತೆ ನಿರ್ಮಾಣದ ಕಾರ್ಯವನ್ನು ನೋಡಿದಾಗ ಇದು ಸಾಧ್ಯವಾಗದಿರಬಹುದು. ಸುಮಾರು 34 ಕಿ.ಮೀ.ನಷ್ಟು ಕಾಮಗಾರಿಗಳು ಸಾರ್ವಜನಿಕರ ಕಣ್ಣಿಗೆ ಕಾಣದಿರುವುದರಿಂದ ನಿಮಗೆ ಈ ಅನುಮಾನ ಬರಬಹುದು. ಆದರೆ ಈ ಬಗ್ಗೆಅನುಮಾನ ಬೇಡ ಜುಲೈ ವೇಳೆಗೆ ಮೊದಲ ವಿಸ್ತರಣೆಯು ಪೂರ್ಣಗೊಳ್ಳುತ್ತದೆ ಎಂದ ಸಂಸದರು, ನಿಡಘಟ್ಟದಿಂದ ಮೈಸೂರಿನ ರಸ್ತೆ ಕಾಮಗಾರಿಯು ದಸರಾ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
Recommended Video