ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಳುತ್ತಿದೆಯೆಂದು 2 ವರ್ಷದ ಮಗುವನ್ನು ಹೊಡೆದು ಕೊಂದ ತಂದೆ–ತಾಯಿ

|
Google Oneindia Kannada News

ಮೈಸೂರು, ಜುಲೈ 6: ತಂದೆ-ತಾಯಿಯ ನಿರ್ಲಕ್ಷ್ಯದಿಂದ 2 ವರ್ಷದ ಮಗುವೊಂದು ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಕುಶಾಲ್ ಸಾವನ್ನಪ್ಪಿದ ಮಗು. ಎಚ್.ಡಿ.ಕೋಟೆ ತಾಲ್ಲೂಕಿನ ಸವ್ವೆ ಗ್ರಾಮದ ಶಶಿಕುಮಾರ್ ಹಾಗೂ ಪರಿಮಳಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 4 ವರ್ಷದ ಖುಷಿ ಎಂಬ ಹೆಣ್ಣು ಮಗಳು ಹಾಗೂ 2 ವರ್ಷದ ಕುಶಾಲ್ ಎಂಬ ಗಂಡು ಮಗು ಇತ್ತು. ಆದರೆ ಶಶಿಕುಮಾರ್, ಈ ಗಂಡು ಮಗು ನನಗೆ ಹುಟ್ಟಿಲ್ಲ ಎಂದು ಯಾವಾಗಲೂ ಜಗಳ ತೆಗೆಯುತ್ತಲೇ ಇದ್ದ. ತನ್ನ ಗಂಡನಿಗೆ ಇಷ್ಟವಿಲ್ಲದ ಮಗು ತನಗೂ ಬೇಡ ಎಂಬಂತೆ ಮಗು ಹಠ ಮಾಡಿದರೆ ಪರಿಮಳಾ ಕೂಡ ಆ ಮಗುವಿಗೆ ಹೊಡೆಯುತ್ತಿದ್ದಳು ಎನ್ನಲಾಗಿದೆ.

ಮೈಸೂರಿನ ಅಪರಾಧ ಪ್ರಕರಣಗಳ ಮಾಹಿತಿ ನೀಡಿದ ಆಯುಕ್ತರುಮೈಸೂರಿನ ಅಪರಾಧ ಪ್ರಕರಣಗಳ ಮಾಹಿತಿ ನೀಡಿದ ಆಯುಕ್ತರು

ಮತ್ತೆ ಜೂನ್ 30ರಂದು ಮಗು ಅಳುತ್ತಿದ್ದ ಕಾರಣವಾಗೇ, ಶಶಿಕುಮಾರ್ ಹಾಗೂ ಪರಿಮಳಾ ನಡುವೆ ಜಗಳವಾಗಿದೆ. ಆ ಸಂದರ್ಭದಲ್ಲೂ ಮಗುವಿಗೆ ಥಳಿಸಲಾಗಿದೆ. ಗಾಯಗೊಂಡಮಗುವನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

Father and mother killed 2 year baby in Mysuru

ಈ ಸಂಬಂಧ ಪರಿಮಳಾ ಸಹೋದರ ಗೋವಿಂದ ರಾಜು ದೂರು ದಾಖಲಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಸಾವಿನಲ್ಲಿ ತಾನು ಭಾಗಿಯಾಗಿರುವುದಾಗಿ ಪರಿಮಳಾ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

English summary
Father and mother killed 2 year baby in Mysuru. on June 30, when the baby is crying, Shashikumar and Parimala have quarreled. The baby was beaten at that time. The injured baby has been admitted to the Cheluwamba Hospital in Mysore. But the child died with the failure of treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X