ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತ: ಅಪಾಯದಿಂದ ಬಡಗಲಪುರ ನಾಗೇಂದ್ರ ಪಾರು

|
Google Oneindia Kannada News

ಮೈಸೂರು, ಮೇ 31: ಸರಳ ವಿವಾಹ ಸಮಾರಂಭ ಮುಗಿಸಿ ಬರುವಾಗ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

ಕಾವೇರಿ ಆದೇಶ: 'ಕುಡಿಯೋಕೇ ನೀರಿಲ್ಲ, ಕೊಡೋದಾದ್ರೂ ಹೇಗೆ?'ಕಾವೇರಿ ಆದೇಶ: 'ಕುಡಿಯೋಕೇ ನೀರಿಲ್ಲ, ಕೊಡೋದಾದ್ರೂ ಹೇಗೆ?'

ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ ಘಟನೆ ಸಂಭವಿಸಿದೆ. ಸರಳ ವಿವಾಹಕ್ಕೆ ಆಗಮಿಸಿದ್ದ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರರವರು ಕಾರ್ಯಕ್ರಮ ಮುಗಿಸಿ ರಾತ್ರಿ ಹಿಂತಿರುಗುತ್ತಿದ್ದರು. ನಿನ್ನೆ ರಾತ್ರಿ ಮಳೆ‌ ಬಂದಿದ್ದ ಕಾರಣ ರಸ್ತೆಯಲ್ಲಿ ನಿಯಂತ್ರಣಕ್ಕೆ ಸಿಗದೆ ಕಾರು ಆಯತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು ಪಲ್ಟಿಯಾಗಿದೆ.

Farmers association leader Badagalapura Nagendra car accident in chamarajnagar

ಘಟನೆಯಲ್ಲಿ ಬಡಗಲಪುರ ನಾಗೇಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಾಗೇಂದ್ರ ಅವರ ಜೊತೆ ಉಪಾಧ್ಯಕ್ಷ, ಕಾರು ಚಾಲಕ ಕೂಡ ಸುರಕ್ಷಿತವಾಗಿದ್ದಾರೆ.

English summary
Farmers association leader Badagalapura Nagendra car accident in chamrajanagara. He escaped from injuiry in this accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X