ಮಾಜಿ ಸಿಎಂ ಸಿದ್ದರಾಮಯ್ಯಗೆ ದೃಷ್ಟಿದೋಷ: ಯಶಸ್ವಿ ಶಸ್ತ್ರಚಿಕಿತ್ಸೆ
ಮೈಸೂರು, ಆಗಸ್ಟ್ 7 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಗಣ್ಣಿನ ದೃಷ್ಟಿದೋಷದಿಂದಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಪರೀಕ್ಷಿಸಿದ ಬೆಂಗಳೂರಿನ ಡಾ. ರಮೇಶ್ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.
ಬೆಂಗಳೂರಿನ ನೇತ್ರತಜ್ಞ ಡಾ.ಟಿ.ಕೆ ರಮೇಶ್, ದೃಷ್ಟಿದೋಷದಿಂದ ಬಳಲುತ್ತಿದ್ದ ಸಿದ್ದರಾಮಯ್ಯರವರನ್ನು ತಪಾಸಣೆ ನಡೆಸಿದಾಗ ಅವರ ಎಡಗಣ್ಣಿನಲ್ಲಿ ದೋಷ ಕಂಡು ಬಂದಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಲ್ಲದೇ ವೈದ್ಯರು ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ವಿಶ್ರಾಂತಿಗೂ ಸೂಚಿಸಿದ್ದಾರೆ.
ಕೆಲವು ದಿನಗಳಿಂದ ಕಣ್ಣು ನೋವಿನಿಂದ ಬಳಲುತ್ತಿದ್ದ ಅವರಿಗೆ ವೈದ್ಯರ ತಂಡ ಇದೇ ಭಾನುವಾರ ಶಸ್ತ್ರಚಿಕಿತ್ಸೆ ನಡೆಸಿದ್ದು, ಸಿದ್ದರಾಮಯ್ಯನವರು ಸದ್ಯ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Comments
English summary
Former CM Siddararamaiah, underwent eye surgery on Sunday evening at Ramesh Eye Clinic, in Bengaluru. Know siddaramaih getting speedy recovery