ಎಸ್ಸೆಂ ಕೃಷ್ಣ ಅವರ ಹಾದಿ ತುಳಿದ ಕಾಂಗ್ರೆಸ್ ಮುಖಂಡ
ಎಸ್ಸೆಂ ಕೃಷ್ಣ ಅವರ ಹಾದಿ ತುಳಿದ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಎಂ ಶಿವಣ್ಣ ಅವರು ಈಗ ಬಿಎಸ್ ಯಡಿಯೂರಪ್ಪ ಅವರ ಜತೆ ನಂಜನಗೂಡಿನಲ್ಲಿ ಪ್ರಚಾರ ನಡೆಸಿದ್ದಾರೆ.
ಗುಂಡ್ಲುಪೇಟೆ, ಮಾರ್ಚ್ 27: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಮತ್ತೊಬ್ಬ ಪ್ರಮುಖ ಮುಖಂಡ, ಚಾಮರಾಜನಗರದ ಮಾಜಿ ಸಂಸದ ಎಂ ಶಿವಣ್ಣ ಅವರು ಕಮಲಕ್ಕೆ ಜೈ ಎಂದಿದ್ದಾರೆ. ಉಪ ಚುನಾವಣಾ ಪ್ರಚಾರ ನಿರತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಕಾಂಗ್ರೆಸ್ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯಲ್ಲಿ ಎಲ್ಲವೂ ಸರಿಯಿಲ್ಲ. ಹಿರಿಯ ನಾಯಕರಿಗೆ ಬೆಲೆ ಇಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ಎಂ ಶಿವಣ್ಣ ಇದೇ ಸಂದರ್ಭದಲ್ಲಿ ಹೇಳಿದರು. ದಲಿತ ಮುಖಂಡ ಶಿವಣ್ಣ ಅವರಿಗೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯಿದೆ.[ಜೆಡಿಎಸ್ನಿಂದ ಬಿಜೆಪಿಗೆ ಹಾರಿದ ಕೋಟೆ ಶಿವಣ್ಣ]
ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಜತೆಗೂಡಿ, ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಪರ ಪ್ರಚಾರ ನಡೆಸಿದರು.
Former MP and Senior @INCIndia leader Sri. M Shivanna joins BJP in presence of BJP State President Shri @BSYBJP at Gundlupet today. pic.twitter.com/aHeSIyF41H
— BJP Karnataka (@BJP4Karnataka) March 27, 2017
ಮುಂದೆ ನಂಜನಗೂಡಿನ ಅಭ್ಯರ್ಥಿ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪರ ಪ್ರಚಾರಕ್ಕೆ ತೆರಳಲಿದ್ದಾರೆ.
Comments
sm krishna mysuru nanjangud gundlupet assembly election yediyurappa ಎಸ್ಎಂ ಕೃಷ್ಣ ಮೈಸೂರು ನಂಜನಗೂಡು ಗುಂಡ್ಲುಪೇಟೆ ವಿಧಾನಸಭೆ ಚುನಾವಣೆ ಯಡಿಯೂರಪ್ಪ
English summary
There seems to be no respite for the Congress. A week after S M Krishna, the senior most leader of the Congress joined the BJP another has followed his footsteps. This time it is former MP, M Shivanna has decided to join the BJP. He has indicated his decision to quit the Congress.