ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಟ್ವೀಟ್ ವಾರ್ ಗೆ ಈಶ್ವರಪ್ಪ ಮಾರುತ್ತರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 19: "ಕುಮಾರಸ್ವಾಮಿ ಸಿನಿಮಾ ನೋಡಿಕೊಂಡು ಇರುವುದು ಒಳ್ಳೆಯದ್ದು. ಅವರಿಗೆ ಅಧಿಕಾರದಿಂದ ಇಳಿದ ಮೇಲೆ ಉದ್ಯೋಗ ಏನಿದೆ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ ಸಚಿವ ಈಶ್ವರಪ್ಪ. ಇಬ್ಬರ ನಡುವೆ ಶುರುವಾಗಿದ್ದ ಟ್ವಿಟ್ಟರ್ ವಾರ್ ಗೆ ಈ ರೀತಿ ಮರು ಉತ್ತರ ನೀಡಿದ್ದಾರೆ ಈಶ್ವರಪ್ಪ.

ಟ್ವಿಟ್ಟರ್‌ನಲ್ಲಿ ಕೆಣಕಿದ ಈಶ್ವರಪ್ಪಗೆ ಗುದ್ದಿದ ಕುಮಾರಸ್ವಾಮಿಟ್ವಿಟ್ಟರ್‌ನಲ್ಲಿ ಕೆಣಕಿದ ಈಶ್ವರಪ್ಪಗೆ ಗುದ್ದಿದ ಕುಮಾರಸ್ವಾಮಿ

ಮೈಸೂರಿನಲ್ಲಿ ಮಾತನಾಡಿದ ಅವರು, "ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಭಾಷೆ ಮೇಲೆ ಹಿಡಿತ ಇರಬೇಕು. ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲೆಬೆಲೆ ದೇಶಾದ್ಯಂತ ಜನ ಜಾಗೃತಿ ಮಾಡುತ್ತಿದ್ದಾರೆ. ಅಂಥವರ ವಿರುದ್ಧವೂ ಹಗುರವಾಗಿ ಮಾತನಾಡುವುದು ಒಳ್ಳೆಯದ್ದಲ್ಲ" ಎಂದು ಹೇಳಿದ್ದಾರೆ.

Eshwarappa Reaction To Kumaraswamy Tweets

ಎಚ್‌ಡಿಕೆ ಅಲ್ಲ ಸಿಡಿಕೆ ಎಂದವರು ಯಾರೂ ಗೊತ್ತಾ..? ಎಚ್‌ಡಿಕೆ ಅಲ್ಲ ಸಿಡಿಕೆ ಎಂದವರು ಯಾರೂ ಗೊತ್ತಾ..?

ಇದೇ ಸಂದರ್ಭ ಎಸ್‌ಡಿಪಿಐ, ಪಿಎಫ್ ‌ಐ ಸಂಘಟನೆಗಳ ನಿಷೇಧ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ. "ಎಸ್‌ಡಿಪಿಐ ಹಾಗೂ ಪಿಎಫ್ ‌ಐ ಭಯೋತ್ಪಾದನಾ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ ಕೂಗಿದ್ದನ್ನು ನೋಡಿದ್ದೇವೆ. ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‌ಡಿಪಿಐ, ಪಿಎಫ್ ‌ಐ ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ" ಎಂದರು.

English summary
Minister Eshwarappa in mysuru gave sarcastic reaction to former cm kumaraswamy tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X