ಚಾಮುಂಡಿ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ
ಮೈಸೂರು, ಜು.4: ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆ ಜನ ಹರಿದು ಬರುತ್ತಿದ್ದಾರೆ. ಆಷಾಢ ಮಾಸದ ಮೊದಲ ಶುಕ್ರವಾರವನ್ನು ಸ್ವಾಗತಿಸಲು ದೇವಸ್ಥಾನದ ಒಳಗಿನ ಆವರಣವನ್ನು ಹೂವಿನ ಅಲಂಕಾರದ ಜೊತೆಗೆ 1,500 ನೇತಾಡುವ ತೋತಾಪುರಿ ಮಾವಿನ ಹಣ್ಣುಗಳನ್ನು ಸೇರಿಸಿ ಶೃಂಗರಿಸಲಾಗಿತ್ತು.
ಎಂದಿನಂತೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಅಮ್ಮನವರ ದರ್ಶನ ಪಡೆದರು. ದರ್ಶನಕ್ಕೆ ಶುಲ್ಕ ಪಾವತಿಸಿದ ಹಾಗೂ ಗಣ್ಯ ಭಕ್ತರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಶೇಷವಾಗಿ ಮೊದಲ ಬಾರಿಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂಸದ ಪ್ರತಾಪ್ ಸಿಂಹ ಮುಂಜಾನೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.[ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ]
ಜುಲೈ 11, ಜುಲೈ 18 ಹಾಗೂ ಜುಲೈ 25 ರಂದು ಆಷಾಢ ಶುಕ್ರವಾರಗಳಿದ್ದು ಮೂರನೇ ಶುಕ್ರವಾರ ಚಾಮುಂಡಿ ದೇವಿ ವರ್ಧಂತಿಯೂ ಇರುವುದರಿಂದ ಹೆಚ್ಚಿನ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ.
Comments
English summary
The precincts of Chamundi Hill atop which is the temple of Sri Chamundeshwari, the presiding deity of Mysore, was steeped in divinity today as thousands of devotees, including women and children thronged the venue and offered pujas on the occasion of this year’s first Ashada Friday (the remaining three Ashada Fridays fall on July 11, 18 and 25).