ಸುತ್ತೂರು ಶ್ರೀಗಳೊಂದಿಗೆ ಉಪಮುಖ್ಯಮಂತ್ರಿ ಪರಮೇಶ್ವರ ಸುದೀರ್ಘ ಚರ್ಚೆ
ಮೈಸೂರು, ಜೂನ್ 24 : ಮೈಸೂರಿಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದ ವೇಳೆ ಮೈಸೂರಿನ ಸುತ್ತೂರು ಮಠಕ್ಕೆ ಆಗಮಿಸಿ ಸುತ್ತೂರು ಶ್ರೀಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು.
ಡಿಸಿಎಂ ಸಾಗುವ ಮಾರ್ಗದಲ್ಲಿ ಬಿಜೆಪಿ ಬಾವುಟ: ನೊಟೀಸ್ ಜಾರಿ
ಚಾಮುಂಡಿಬೆಟ್ಟದ ತಪ್ಪಲಿನ ಬಳಿಯ ಸುತ್ತೂರಿನಲ್ಲಿ ನೂತನ ಸೈನ್ಸ್ ಸಿಟಿ ಪ್ರಸ್ತಾವನೆಗೊಂಡಿರುವ ಸ್ಥಳ ಪರಿಶೀಲನೆಗಾಗಿ ಡಿಸಿಎಂ ಪರಮೇಶ್ವರ್ ಭೇಟಿ ನೀಡಿದ್ದರು. ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಾ.ಜಿ. ಪರಮೇಶ್ವರ್ ಅವರಿಗೆ ಪೊಲೀಸ್ ಇಲಾಖೆಯಿಂದ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಡಾ.ಜಿ. ಪರಮೇಶ್ವರ್ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದಾದ ನಂತರ ಪೋಲಿಸ್ ಸಿಬ್ಬಂದಿ ಹಾಗೂ ಅಧಿಕಾರಿಗಳೊಡನೆ ಮಠದಲ್ಲೇ ಉಪಹಾರ ಸೇವಿಸಿದರು. ಆ ಬಳಿಕ ಸುತ್ತೂರು ಶ್ರೀಗಳೊಡನೆ ಡಾ.ಜಿ.ಪರಮೇಶ್ವರ್ ಸುದೀರ್ಘ ಸಮಾಲೋಚನೆ ನಡೆಸಿದರು. ಇದಾದ ಬಳಿಕ ಸೈನ್ಸ್ ಸಿಟಿ ಪ್ರಸ್ತಾವನೆ ಹಿನ್ನೆಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Comments
English summary
Deputy Chief m minister G Parameshwara visits Mysuru Suttur Mutt. On the basis of a new science city plan, Parameshwara meets suttur seer and made the special meeting.
Story first published: Monday, June 24, 2019, 16:26 [IST]