ವಿಜಯ ದಶಮಿಯಂದೇ ಜಂಬೂ ಸವಾರಿ: ಶ್ರೀನಿವಾಸ ಪ್ರಸಾದ್
ಮೈಸೂರು, ಅ.4: ಮೈಸೂರು ಅರಸು ಮನೆತನದ ರಾಣಿ ಪ್ರಮೋದಾದೇವಿ ಒಡೆಯರ್, ಅರಮನೆ ಪುರೋಹಿತರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ನೇತೃತ್ವದ ದಸರಾ ಸಮಿತಿ ಮಾತುಕತೆ ನಡೆಸಿ ಕೊನೆಗೂ ಪರಿಹಾರ ಕಂಡುಕೊಂಡಿದ್ದಾರೆ. ಈ ಹಿಂದೆ ನಿಗದಿಯಾದಂತೆ ವಿಜಯದಶಮಿ ದಿನದಂದೇ ವಿಶ್ವಪ್ರಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಸಲಾಗುತ್ತದೆ.
ಸುಮಾರು ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ ಸರ್ಕಾರದ ಪ್ರತಿನಿಧಿಗಳು, ಜಂಬೂ ಸವಾರಿ ಮೆರವಣಿಗೆಯನ್ನು ಪೂರ್ವ ನಿಗದಿಯಂತೆ ಅ.22ರ ಬದಲಾಗಿ 23ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.
ಕಳೆದ ಎರಡು ದಿನಗಳ ಹಿಂದೆ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಆಯುಧಪೂಜೆ ದಿನದಂದು ಜಂಬೂ ಸವಾರಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದರು. ಜತೆಗೆ ದಸರಾ ಉದ್ಘಾಟನೆ ಅ.14ರ ಬದಲು 13ರಂದು ಹಮ್ಮಿಕೊಳ್ಳಲಾಗಿದೆ ಎಂದಿದ್ದರು. ರಾಣಿ ಪ್ರಮೋದಾದೇವಿ ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಜತೆಗೆ ರಾಜ್ಯಾದ್ಯಂತ ದಿನಾಂಕ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.[ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?]
ದಸರಾ
ದಿನಾಂಕ
ಬದಲಾವಣೆ
ಮಾಡಿರುವ
ಬಗ್ಗೆ
ಮೈಸೂರಿನ
ಇತಿಹಾಸತಜ್ಞ
ಪ್ರೊ.ನಂಜರಾಜೇ
ಅರಸ್
ಅಸಮಾಧಾನ
ವ್ಯಕ್ತಪಡಿಸಿ,'ಅ.22ರಂದು
ದಸರಾ
ಆಚರಣೆ
ಮಾಡಿದರೆ,
ಅ.23ರಂದು
ಯಾವ
ಕಾರ್ಯಕ್ರಮ
ಮಾಡುತ್ತೀರಿ?.
ಅ.23ರಂದು
ಸರ್ಕಾರಿ
ರಜೆ
ಘೋಷಣೆ
ಮಾಡಿರುವುದು
ಏಕೆ?'
ಎಂದು
ಅವರು
ಸರ್ಕಾರವನ್ನು
ಪ್ರಶ್ನಿಸಿದ್ದರು.
[ಅ.22ರಂದು
ಮೈಸೂರು
ದಸರಾ
ಆಚರಣೆಗೆ
ವಿರೋಧ]
ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಪ್ರಸಾದ್ ರಾಣಿ ಪ್ರಮೋದಾದೇವಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ದಿನಾಂಕವನ್ನು 23ರಂದೇ ಜಂಬೂಸವಾರಿ ನಡೆಸುವುದಾಗಿ ತಿಳಿಸಿದ್ದಾರೆ. ಈ ವೇಳೆ ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾಧಿಕಾರಿ ಶಿಖಾ ಉಪಸ್ಥಿತರಿದ್ದರು. ರಾಜ ಪರಿವಾರಕ್ಕೆ ದಸರಾ ಹಬ್ಬಕ್ಕೆ ಅಧಿಕೃತ ಆಹ್ವಾನವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.
'ಅ.23ರ ಶುಕ್ರವಾರ ಮಧ್ಯಾಹ್ನ 1.10ರಿಂದ 1.25ರ ನಡುವಿನ ಮಕರ ಲಗ್ನದಲ್ಲಿ ನಂದಿಪೂಜೆ ನಡೆಯಲಿದೆ. ವಿಜಯದಶಮಿಯ ದಿನ ಮಧ್ಯಾಹ್ನ 3.12ರಿಂದ ಸಂಜೆ 4.10ರ ಕುಂಭಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.