ಚಾಂಪಿಯನ್ಸ್ ಟ್ರೋಫಿ ಭಾರತೀಯರ ಮುಡಿಗೇರಲೆಂದು ಮೈಸೂರಿನಲ್ಲಿ ಪ್ರಾರ್ಥನೆ
ಮೈಸೂರು , ಜೂನ್ 17 : ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತ ತಲುಪಿದ್ದು, ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ ಮತ್ತು ಸಾಂಪ್ರದಾಯಕ ಎದುರಾಳಿ ಪಾಕ್ ನಾಳೆ ಸೆಣಸಾಟ ನಡೆಸಲಿವೆ. ಈ ಹಿನ್ನೆಲೆ ನಾಳಿನ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನ ಬಗ್ಗು ಬಡಿದು ಚಾಂಪಿಯನ್ಸ್ ಟ್ರೋಫಿ ಮುಡಿಗೇರಿ ಸಿಕೊಳ್ಳಲಿ ಎಂದು ಶುಭ ಹಾರೈಸಿ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ಪೂಜೆ ಸಲ್ಲಿಸಿದ್ದಾರೆ.
ಒಂದೇ ನೆಲದಲ್ಲಿ ಭಾರತ- ಪಾಕಿಸ್ತಾನ ನಡುವೆ ಎರಡು ಪಂದ್
ನಗರದ ಗಣಪತಿ ಹಾಗೂ ಮೃತ್ಯುಂಜಯ ಸ್ವಾಮಿದೇಗುಲದಲ್ಲಿ ಕ್ರಿಕೆಟ್ ಅಭಿಮಾನಿಗಳು ಪೂಜೆ ಹೋಮ ನಡೆಸಿ ಭಾರತದ ಪರ ಜಯಘೋಷಣೆ ಕೂಗಿದರು.
ಮೊದಲ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಇಂಗ್ಲೇಂಡ್ ತಂಡವನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದರೇ 2ನೇ ಸೆಮಿಫೈನಲ್ ನಲ್ಲಿ ಭಾರತ ಬಾಂಗ್ಲಾವನ್ನು ಸೋಲಿಸಿ ಫೈನಲ್ ತಲುಪಿದೆ. ಇನ್ನು ನಾಳೆ ನಡೆಯುವ ಪಂದ್ಯ ರೋಚಕವಾಗಿದ್ದು, ಭಾರತ ಟ್ರೋಫಿ ಗೆಲ್ಲುವ ಫೆವರೇಟ್ ಆಗಿದೆ.
Comments
English summary
Cricket fans in Mysuru offered prayers for Team India’s victory in Champions Trophy final to be played against Pakistan at The Oval in United Kingdom on Sunday (June 18th). They offered prayers at Ganapathi and Eshwara Temple on M G Road, here on Saturday. Wearing Team India jerseys, they displayed posters supporting the Indian players.
Story first published: Saturday, June 17, 2017, 18:08 [IST]