ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯದುವೀರರಿಗೆ ಮಂಗಳಸ್ನಾನ, ರಾಜಮಾತೆಗೆ ಪಾದಪೂಜೆ

|
Google Oneindia Kannada News

ಮೈಸೂರು, ಮೇ 27 : ಮೈಸೂರು ಅರಮನೆಯಲ್ಲಿ ಹಬ್ಬದ ಸಂಭ್ರಮ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಟ್ಟಾಭಿಷೇಕದ ವಿಧಿವಿಧಾನಗಳು ಬುಧವಾರ ಬೆಳಗ್ಗೆಯಿಂದಲೇ ಅಂಬಾವಿಲಾಸ ಅರಮನೆಯಲ್ಲಿ ಆರಂಭವಾಗಿದೆ. ಗುರುವಾರ ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷೇಕ ನಡೆಯಲಿದೆ.

ಬುಧವಾರ ಮುಂಜಾನೆ 5 ಗಂಟೆಗೆ ಯದುವೀರ ಒಡೆಯರ್‌ ಅವರಿಗೆ ಮಂಗಳಸ್ನಾನ ಮಾಡಿಸುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಮಂಗಳಸ್ನಾನದ ನಂತರ ಮೆರವಣಿಗೆಯಲ್ಲಿ ಅರಮನೆ ಆವರಣದಲ್ಲಿನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯದುವೀರ ಒಡೆಯರ್ ಅಂಬಾ ವಿಲಾಸ ಅರಮನೆಗೆ ಆಗಮಿಸಿದರು. [ಯದುವೀರರಿಗೆ ಪಟ್ಟಾಭಿಷೇಕ ಹೀಗೆ ನಡೆಯುತ್ತದೆ]

ಧಾರ್ಮಿಕ ಪೂಜಾ ಕಾರ್ಯದ ವೇಳೆ ಸಂಪ್ರದಾಯದಂತೆ ರಾಜಮಾತಾ ಪ್ರಮೋದಾ ದೇವಿ ಒಡೆಯರ್ ಅವರಿಗೆ ಯುವರಾಜ ಯದುವೀರ ಒಡೆಯರ್ ಪಾದಪೂಜೆ ನೆರವೇರಿಸಿದರು. ಈ ವೇಳೆ ಶ್ರೀಕಂಠದತ್ತ ಒಡೆಯರ್ ಅವರನ್ನು ನೆನೆದು ರಾಣಿ ಪ್ರಮೋದಾ ದೇವಿಯವರು ಕಣ್ಣೀರಿಟ್ಟಿರು. [ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ]

ಗುರುವಾರ ಯದುವೀರ ಅರಸ್ ಅವರ ಪಟ್ಟಾಭಿಷೇಕ ನಡೆಯಲಿದೆ. ಬೆಳಗ್ಗೆ 9.30 ರಿಂದ 10.30ರವರೆಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ನಡೆಯಲಿದೆ. ಆದರೆ, ಈ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಸಂಜೆ 6.30ಕ್ಕೆ ದರ್ಬಾರ್ ಸಭಾಂಗಣದಲ್ಲಿ ಆರತಕ್ಷತೆ ಏರ್ಪಡಿಸಲಾಗಿದ್ದು ಇದನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. [ಚಿತ್ರಕೃಪೆ : ಯದುವೀರ ಒಡೆಯರ್ ಫೇಸ್ ಬುಕ್ ಪುಟ]

ಮೈಸೂರು ಅರಮನೆಯಲ್ಲಿ ಹಬ್ಬದ ಸಂಭ್ರಮ

ಮೈಸೂರು ಅರಮನೆಯಲ್ಲಿ ಹಬ್ಬದ ಸಂಭ್ರಮ

ಮೈಸೂರು ಅರಮನೆಯಲ್ಲಿ ಹಬ್ಬದ ಸಂಭ್ರಮ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಟ್ಟಾಭಿಷೇಕದ ವಿಧಿವಿಧಾನಗಳು ಬುಧವಾರ ಬೆಳಗ್ಗೆಯಿಂದಲೇ ಅಂಬಾವಿಲಾಸ ಅರಮನೆಯಲ್ಲಿ ಆರಂಭವಾಗಿದೆ.

ಮಂಗಳಸ್ನಾನದೊಂದಿಗೆ ಕಾರ್ಯಕ್ರಮ ಆರಂಭ

ಮಂಗಳಸ್ನಾನದೊಂದಿಗೆ ಕಾರ್ಯಕ್ರಮ ಆರಂಭ

ಮುಂಜಾನೆ 5 ಗಂಟೆಗೆ ಯದುವೀರ ಒಡೆಯರ್‌ ಅವರಿಗೆ ಮಂಗಳಸ್ನಾನ ಮಾಡಿಸುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಮಂಗಳಸ್ನಾನದ ನಂತರ ಅರಮನೆ ಆವರಣದಲ್ಲಿನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯದುವೀರ ಒಡೆಯರ್ ಅಂಬಾ ವಿಲಾಸ ಅರಮನೆಗೆ ಆಗಮಿಸಿದರು.

ಪರಕಾಲ ಶ್ರೀಗಳ ಪಾದಪೂಜೆ

ಪರಕಾಲ ಶ್ರೀಗಳ ಪಾದಪೂಜೆ

ಅಂಬಾವಿಲಾಸ ಅರಮನೆಯಲ್ಲಿ ಪರಕಾಲ ಮಠದ ಶ್ರೀಗಳಿಗೆ ಯದುವೀರ ಒಡೆಯರ್ ಅವರು ಪಾದಪೂಜೆ ನೆರವೇರಿಸಿದರು.

ಅರಮನೆಯಲ್ಲಿ ಗಣಪತಿ ಹೋಮ

ಅರಮನೆಯಲ್ಲಿ ಗಣಪತಿ ಹೋಮ

ಅಂಬಾ ವಿಲಾಸ ಅರಮನೆ ಒಳಭಾಗದಲ್ಲಿ ಗಣಪತಿ ಪೂಜೆ, ಪುಣ್ಯಾಹ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಸಂಜೆ ಕಂಕಣಧಾರಣ ಕಾರ್ಯಕ್ರಮ ನಡೆಯಿತು.

ಕಣ್ಣೀರಿಟ್ಟ ಪ್ರಮೋದಾ ದೇವಿ ಒಡೆಯರ್

ಕಣ್ಣೀರಿಟ್ಟ ಪ್ರಮೋದಾ ದೇವಿ ಒಡೆಯರ್

ಧಾರ್ಮಿಕ ಪೂಜಾ ಕಾರ್ಯದ ವೇಳೆ ಸಂಪ್ರದಾಯದಂತೆ ರಾಜಮಾತಾ ಪ್ರಮೋದಾ ದೇವಿ ಒಡೆಯರ್ ಅವರಿಗೆ ಯುವರಾಜ ಯದುವೀರ ಒಡೆಯರ್ ಪಾದಪೂಜೆ ನೆರವೇರಿಸಿದರು. ಈ ವೇಳೆ ಶ್ರೀಕಂಠದತ್ತ ಒಡೆಯರ್ ಅವರನ್ನು ನೆನೆದು ರಾಣಿ ಪ್ರಮೋದಾ ದೇವಿಯವರು ಕಣ್ಣೀರಿಟ್ಟಿರು. [ಪಂಚಭೂತಗಳಲ್ಲಿ ಶ್ರೀಕಂಠದತ್ತ ಒಡೆಯರ್ ಲೀನ]

ಭಾವಿ ಪತ್ನಿ ತ್ರಿಶಿಕಾ ಕುಮಾರಿ ಆಗಮನ

ಭಾವಿ ಪತ್ನಿ ತ್ರಿಶಿಕಾ ಕುಮಾರಿ ಆಗಮನ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಭಾವಿ ಪತ್ನಿ ತ್ರಿಶಿಕಾ ಕುಮಾರಿ ಅವರು ಮೈಸೂರಿಗೆ ಆಗಮಿಸಿದ್ದಾರೆ.

English summary
The rituals and ceremonies which will lead to the coronation of Yaduveer Krishna Datta Chamaraja Wadiyar as the new maharaja commenced at Mysuru palace on Wednesday, May 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X