ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾವಿದನಿಗೆ ಸ್ಥಳದಲ್ಲೇ 10 ಸಾವಿರ ಕೊಟ್ಟ ಸಿದ್ದರಾಮಯ್ಯ

|
Google Oneindia Kannada News

ಮೈಸೂರು, ಮೇ 20 : ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕ ಕಲಾವಿದರಿಗೆ ಜನತಾದರ್ಶನದಲ್ಲಿ 10 ಸಾವಿರ ರೂ. ಸಹಾಯ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿರುವ ಕಲಾವಿದನನ್ನು ಗುರುತಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಸಹಾಯ ಮಾಡಿದರು.

ಬುಧವಾರ ಮೈಸೂರಿನ ಶಾರದಾ ದೇವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಅವರ ಜನತಾ ದರ್ಶನ ನಡೆಸಿದರು. ಹಲವಾರು ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಅಲ್ಲಿಗೆ ಆಗಮಿಸಿದ್ದರು. ಇವರಲ್ಲಿ ನಾಟಕ ಕಲಾವಿದ ಮರಿಯಪ್ಪ ಅವರು ಸೇರಿದ್ದರು. [ಸನ್ಯಾಸಿ ಮನವಿ ನೋಡಿ ಸಿಎಂ ಸಿದ್ದು ಸುಸ್ತೋ ಸುಸ್ತು]

janata darshan

ಸುಮಾರು 30 ವರ್ಷಗಳಿಂದ ಸಿದ್ದರಾಮಯ್ಯ ಅವರಿಗೆ ಪರಿಚಯವಿರುವ ನಾಟಕ ಕಲಾವಿದ ಮರಿಯಪ್ಪ ಅವರು ಆನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. [ಬಿಬಿಎಂಪಿಗೆ 1 ಸಾವಿರ ಕೋಟಿ ಅನುದಾನ ಕೊಟ್ಟ ಸಿದ್ದರಾಮಯ್ಯ]

ಮರಿಯಪ್ಪ ಅವರ ಸಮಸ್ಯೆ ಆಲಿಸುತ್ತಿದ್ದಂತೆ ಜೇಬಿಗೆ ಕೈ ಹಾಕಿದ ಸಿದ್ದರಾಮಯ್ಯ ಅವರು ಪರ್ಸ್ ತೆಗೆದು ಸ್ಥಳದಲ್ಲಿಯೇ 10 ಸಾವಿರ ರೂ.ಗಳನ್ನು ತೆಗೆದು ಮರಿಯಪ್ಪ ಅವರಿಗೆ ನೀಡಿ, ಮುಂದೆ ಸಾಗಿದರು.

English summary
Karnataka Chief Minister Siddaramaiah holds Janata Darshan in Mysuru on Wednesday. CM hands over Rs 10,000 to drama artistes Mariyappa on spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X