ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭುವನೇಶ್ವರಿ ದೇಗುಲಕ್ಕೆ ಹೋಗದ, ಮೈಸೂರು ಪೇಟ ನಿರಾಕರಿಸಿದ ಚಂಪಾ

By Yashaswini
|
Google Oneindia Kannada News

ಮೈಸೂರು, ನವೆಂಬರ್ 24: ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಅನಿರೀಕ್ಷಿತಗಳು ಎದುರಾದವು. ಮೈಸೂರು ಅರಮನೆ ಆವರಣದಲ್ಲಿ ಇರುವ, ಇಡೀ ರಾಜ್ಯದ ಏಕೈಕ ಭುವನೇಶ್ವರಿ ದೇವಾಲಯಕ್ಕೆ ಮೆರವಣಿಗೆಗೂ ಉನ್ನ ಸಚಿವರಾದ ಮಹದೇವಪ್ಪ ಸೇರಿ ಇತರರು ತೆರಳಿದರು. ಅಲ್ಲಿ ಪೂಜೆ ಕೂಡ ಮಾಡಿಸಿದರು.

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

ಆದರೆ, ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲ (ಚಂಪಾ) ಭುವನೇಶ್ವರಿ ದೇವಾಲಯಕ್ಕೆ ತೆರಳಲಿಲ್ಲ. ಇನ್ನು ಅಧ್ಯಕ್ಷರಿಗೆ ತೊಡಿಸಲು ಕನ್ನಡ ಅಭಿಮಾನಿಗಳು ತಂದಿದ್ದ ಮೈಸೂರು ಪೇಟ ಧರಿಸುವುದಕ್ಕೆ ಕೂಡ ಚಂಪಾ ನಿರಾಕರಿಸಿದರು. ಇದರಿಂದ ಪೇಟ ತಂದಿದ್ದವರು ಪೇಚಿಗೆ ಸಿಕ್ಕಿದಂತೆ ಕಂಡು ಬಂದಿತು.

Chmapa did not go to Bhuvaneshwari temple

ಚಂಪಾರಿಗೆ 2000 ಪತ್ರ ಬರೆದು ಸಮ್ಮೇಳನಕ್ಕೆ ಸ್ವಾಗತ ಕೋರಿದ ವಿದ್ಯಾರ್ಥಿಗಳುಚಂಪಾರಿಗೆ 2000 ಪತ್ರ ಬರೆದು ಸಮ್ಮೇಳನಕ್ಕೆ ಸ್ವಾಗತ ಕೋರಿದ ವಿದ್ಯಾರ್ಥಿಗಳು

ಬಂಡಾಯ ಸಾಹಿತ್ಯದ ಹಿನ್ನೆಲೆಯ ಚಂದ್ರಶೇಖರ ಪಾಟೀಲರು ಸಂಪ್ರದಾಯದ ಹೆಸರಿನಲ್ಲಿನ ಗುಲಾಮಗಿರಿಯನ್ನು ಹಾಗೂ ಮೌಢ್ಯವನ್ನು ಧಿಕ್ಕರಿಸಿದವರು. ಮತ್ತು ಅವುಗಳ ವಿರುದ್ಧ ಹೋರಾಟ-ಚಳವಳಿಗಳನ್ನು ರೂಪಿಸಿ, ಧ್ವನಿ ಎತ್ತಿದವರು. ಆದರೂ ಭುವನೇಶ್ವರಿ ದೇವಾಲಯಕ್ಕೆ ತೆರಳದಿರುವುದು ಹಾಗೂ ಪೇಟ ತೊಡಿಸಲು ಬಂದಾಗ ನಿರಾಕರಿಸಿರುವುದು ಆ ಬಗ್ಗೆ ಭಾವನಾತ್ಮಕ ನಂಟು ಹೊಂದಿದವರಿಗೆ ನೋವುಂಟು ಮಾಡಿದೆ.

English summary
83rd All India Kannada literature convention president Chandrashekhara Patila did not go to Buvaneshwari temple and refused to wear Mysuru peta on the inauguration day in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X