ನೆರೆ ಸಂತ್ರಸ್ತರಿಗಾಗಿ ಸಿ ಎಫ್ ಟಿ ಆರ್ ಐನಿಂದ ಆಹಾರ ಪೊಟ್ಟಣಗಳ ಪೂರೈಕೆ
ಮೈಸೂರು, ಆಗಸ್ಟ್ 11 : ಮಳೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ರೆಡಿ ಟು ಈಟ್ ಆಹಾರ ಪದಾರ್ಥವನ್ನು ಸಿಎಫ್ ಟಿಆರ್ ಐ ಪೂರೈಕೆ ಮಾಡಿದೆ.
ಸಂತ್ರಸ್ತರಿಗೆ ಸಿಎಫ್ ಟಿಆರ್ ಐನಿಂದ ಆಹಾರ ಪೊಟ್ಟಣಗಳ ರವಾನೆ
ತೀವ್ರ ಪ್ರವಾಹಕ್ಕೆ ತುತ್ತಾಗುತ್ತಿರುವ ಜನರಿಗೆ ಆಹಾರ ಪದಾರ್ಥವನ್ನು ಕಳುಹಿಸುವಂತೆ ಈ ಹಿಂದೆ ಹಾಸನ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಮೈಸೂರಿನ ಸಿಎಫ್ ಟಿಆರ್ ಐ ಸಿಬ್ಬಂದಿ 4 ಸಾವಿರ ಚಪಾತಿ, 70 ಕೆ.ಜಿ. ಟೊಮೆಟೊ ಗೊಜ್ಜು, 100 ಕೆ.ಜಿ. ರಸ್ಕ್, 6 ಸಾವಿರ ಬಾಟಲಿ ನೀರು, 300 ಕೆ.ಜಿ. ಅವಲಕ್ಕಿ ಪ್ಯಾಕೆಟ್ ಗಳನ್ನು ಕಳುಹಿಸಲಾಗಿದ್ದು, ಇದನ್ನು ನೇರವಾಗಿ ಸೇವಿಸಬಹುದು.
ಅಲ್ಲದೆ ಈ ಪದಾರ್ಥಗಳನ್ನು 6 ತಿಂಗಳು ಕಾಲ ಕೆಡದಂತೆ ಇಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಪ್ರವಾಹಕ್ಕೆ ತುತ್ತಾದ ಇತರ ಜಿಲ್ಲೆಗಳಿಂದಲೂ ಆಹಾರ ಪದಾರ್ಥಗಳು ಬೇಕು ಎಂದು ಜಿಲ್ಲಾಧಿಕಾರಿಗಳಿಂದ ಕೋರಿಕೆ ಬಂದರೆ ಅಗತ್ಯ ಆಹಾರ ಪೂರೈಸಲು ಸಿಎಫ್ ಟಿಆರ್ ಐ ತಂಡ ಸಿಧ್ಧವಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.