ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಬರ್ ಗಳೊಡನೆ ಆಟವಾಡುವ ಅಂಧ ಬಸವರಾಜ್ ಸಾಧನೆಗೆ ಬೆರಗಾಗಲೇಬೇಕು!

By ಯಶಸ್ವಿನಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್.7: ಈತ ಅಪ್ಪಟ ಹಳ್ಳಿ ಹೈದ. ಕೋಟಿಗಟ್ಟಲೇ ಗಣಿತ ಅಂಕೆಯನ್ನು ಹೇಳಿದರೆ ಸಾಕು ಲೀಲಾಜಾಲವಾಗಿ ಗುಣಾಕಾರ, ಭಾಗಕಾರ, ಸಂಕಲನ, ವ್ಯವಕಲನ ಎಲ್ಲವನ್ನು ಪೆನ್ನು ಬೇಡ, ಹಾಳೆ ಇಲ್ಲದೆ ಮಾಡಿ ಮುಗಿಸುತ್ತಾನೆ. ಇವನ ಸಾಧನೆ ನೋಡಿದರೆ ನೀವು ಅಚ್ಚರಿಪಡುವುದರಲ್ಲಿ ಎರಡು ಮಾತಿಲ್ಲ.

ಹೌದು, ಬೆಳಗಾಂ ಜಿಲ್ಲೆಯ ಅಥಣಿ ತಾಲೂಕಿನ ನಿವಾಸಿ ಬಸವರಾಜ್ ಶಂಕರ್ ಉಮ್ರಾಣಿ ಎಂಬ 24ರ ಹರೆಯದ ಯುವಕನ ಜ್ಞಾಪಕ ಶಕ್ತಿಯ ಅಗಾಧತೆ ನೋಡಿದರೆ ಒಮ್ಮೆ ಎದ್ದು ನಿಂತು ಸೆಲ್ಯೂಟ್ ಹೊಡೆಯಬೇಕೆಂದೆನಿಸುತ್ತದೆ.

ಅಂಧರಾಗಿರುವ ಬಸವರಾಜ್ ಅವರ ಸಾಧನೆ ಕಣ್ಣು ಇದ್ದವನೂ ಸಹ ಸಾಧಿಸಲು ಅಸಾಧ್ಯ. ಸಣ್ಣ ವಯಸ್ಸಿನಲ್ಲೇ ಈ ಪ್ರಯತ್ನ ಪ್ರಾರಂಭ ಮಾಡಿದ್ದ ಬಸವರಾಜ್ ಗೆ ಈಗ 24 ವರ್ಷ. ಅಂಧರಾದ ಇವರು ಎಲ್ಲರ ನೆಚ್ಚಿನ ಟಿವಿ ಕಾರ್ಯಕ್ರಮ ಮಜಾ ಟಾಕೀಸ್ ನಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ತೋರಿದ್ದಾರೆ.

ಬೀಡಾ ಕಟ್ಟುತ್ತಿದ್ದ ಪವರ್ ಲಿಫ್ಟರ್ ಈಗ ಉಳ್ಳಾಲ ನಗರಸಭೆ ಸದಸ್ಯೆಬೀಡಾ ಕಟ್ಟುತ್ತಿದ್ದ ಪವರ್ ಲಿಫ್ಟರ್ ಈಗ ಉಳ್ಳಾಲ ನಗರಸಭೆ ಸದಸ್ಯೆ

ಕೇವಲ ನೀವು ಸಂಖ್ಯೆಗಳನ್ನು ಹೇಳಿದರೆ ಸಾಕು, ಯಾವ ಸಹಾಯವೂ ಇಲ್ಲದೆ ನಿಖರ ಉತ್ತರ ಕೊಡುತ್ತಾನೆ. ಯಾವುದೇ ವರ್ಷ, ಇಲ್ಲವೇ ತಿಂಗಳಿನ ದಿನಾಂಕವೂ ಯಾವ ವಾರ ಬರುತ್ತದೆ ಎಂದು ಕೇಳಿದರೆ ಪಂಚಾಂಗದ ಮೊರೆ ಹೋಗದೆ ಕ್ಷಣಾರ್ಧದಲ್ಲಿ ವಾರ ಹೇಳುತ್ತಾನೆ.

ಕಣ್ಣಿದ್ದು ಸಮಯವನ್ನು ಗಡಿಯಾರ ನೋಡಿ ಹೇಳುತ್ತೇವೆ ನಾವು. ಆದರೆ ಕಣ್ಣಿಲ್ಲದೇ, ಗಡಿಯಾರದ ಸಹಾಯವಿಲ್ಲದೇ ಸಮಯ ಎಷ್ಟಾಗಿದೆ ಎಂದು ಕೇಳಿದರೆ ಸಾಕು ನಿಖರವಾದ ಸಮಯ ಹೇಳುವ ನಿಷ್ಣಾತ ಈತ. ಇಷ್ಟೇ ಅಲ್ಲ ಬಸವರಾಜ್ ಸಾಧನೆ, ಇನ್ನು ಮುಂದೆ ಇದೆ ಓದಿ ....

 ಕರಾರುವಕ್ಕಾಗಿ ಹೇಳ್ತಾರೆ ಬೆಲೆ

ಕರಾರುವಕ್ಕಾಗಿ ಹೇಳ್ತಾರೆ ಬೆಲೆ

ನೀವು ಯಾವುದಾದರೊಂದು ನೋಟನ್ನು ಆತನ ಕೈಗಿಟ್ಟು ತಕ್ಷಣವೇ ಕಿತ್ತುಕೊಂಡರೆ ಕ್ಷಣಾರ್ಧದಲ್ಲಿ ನೋಟುಗಳ ಒಟ್ಟು ಮೌಲ್ಯವನ್ನು ಕರಾರುವಕ್ಕಾಗಿ ಹೇಳುವ ಹಾಗೂ ಇನ್ನು ಬೇರೆ ಬೇರೆ ದೇಶದ ಕರೆನ್ಸಿಗಳನ್ನು ಕೈಗಿಟ್ಟು ತಕ್ಷಣವೇ ಕಿತ್ತುಕೊಂಡರೆ ನೋಟುಗಳ ಅಂದಿನ ಮೌಲ್ಯವನ್ನು ಹೇಳುತ್ತಾನೆ.

 30 ರೂ.ಗೆ ನೀರಿನ ಫಿಲ್ಟರ್ ತಯಾರಿಸಿ ವರ್ಲ್ಡ್ ಫೇಮಸ್ ಆದ ಬೆಳಗಾವಿ ಹೈದ 30 ರೂ.ಗೆ ನೀರಿನ ಫಿಲ್ಟರ್ ತಯಾರಿಸಿ ವರ್ಲ್ಡ್ ಫೇಮಸ್ ಆದ ಬೆಳಗಾವಿ ಹೈದ

 ಗಣಿತ ನೀರು ಕುಡಿದಷ್ಟೇ ಸಲೀಸು

ಗಣಿತ ನೀರು ಕುಡಿದಷ್ಟೇ ಸಲೀಸು

ಈತನ ವಿಶೇಷತೆಗಳು ಇಲ್ಲಿಗೆ ನಿಲ್ಲಲಿಲ್ಲ. ರಾಷ್ಟ್ರೀಯ ನಾಯಕರ ಹುಟ್ಟು ಮತ್ತು ಸಾವಿನ ದಿನಾಂಕ, ತಿಂಗಳು, ವರ್ಷ ಹಾಗೂ ವಾರಗಳನ್ನು ಹೇಳುತ್ತಾನೆ. ಹಿಂದೆಂದೋ ಕೇಳಿದ ದೂರವಾಣಿ ಅಥವಾ ಯಾರನ್ನೇ ಭೇಟಿಯಾದ ದಿನಾಂಕ ಕೇಳಿದರೇ ಅಷ್ಟೇ ಖಚಿತವಾಗಿ ಹೇಳುವುದು ಈತನಿಗೆ ನೀರು ಕುಡಿದಷ್ಟೇ ಸಲೀಸು.

ಹೌದು, ಇವನೊಬ್ಬ ಮಾನವ ಕಂಪ್ಯೂಟರ್. ವಿಜಯಪುರ ಗಡಿಯಂಚಿನಲ್ಲಿರುವ ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ಬಸವರಾಜ್ ಸ್ಮರಣಶಕ್ತಿ ಹಾಗೂ ಬುದ್ಧಿಮತ್ತೆಗೆ ಪ್ರತಿಯೊಬ್ಬರು ತಲೆಬಾಗಲೇಬೇಕು.

 ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ, ಅರ್ಜಿ ಆಹ್ವಾನ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ, ಅರ್ಜಿ ಆಹ್ವಾನ

 ಅಂಧನಾಗಲು ಕಾರಣ

ಅಂಧನಾಗಲು ಕಾರಣ

ಬಸವರಾಜ್ ಪೋಷಕರು ಆತನನ್ನು ಮೋದಿ, ಮಿಂಟೋ, ನಾರಾಯಣ ನೇತ್ರಾಲಯ ಸೇರಿದಂತೆ ಕಂಡ ಕಂಡ ನೇತ್ರ ತಜ್ಞರನ್ನು ಕಂಡು ಮಗನಿಗೆ ಬೆಳಕು ನೀಡುವಂತೆ ಅಂಗಲಾಚಿದ್ದಾರೆ. ಆದರೆ ಈತನ ಕಣ್ಣಿನ ನರಗಳ ದೌರ್ಬಲ್ಯದಿಂದಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇದರಿಂದ ತಂದೆ - ತಾಯಿಗಳು ಕೈ ಚೆಲ್ಲಿ ಕುಳಿತರು. ಆದರೂ ಈತ ವಿಶೇಷ ವ್ಯಕ್ತಿಯಾಗಿದ್ದಾನೆ. ಬಸವರಾಜ್ ಗೆ ಎಂಟು ವರ್ಷವಿದ್ದಾಗಲೇ ಮನೆ ಪಕ್ಕದ ಕುಲಕರ್ಣಿ ಎಂಬುವವರು ಶಾಲೆಗೆ ಪ್ರವೇಶ ನೀಡಿಸಲು ನಿರ್ಧರಿಸಿದರು. ಅಂದು ಶಾಲೆಗೆ ಸೇರಿಸಿದರು. ನಂತರ ಆತ ಬೆಳೆದದ್ದೇ ವಿಶೇಷ ಸಾಧನೆ.

ಮಹೇಶ್ ಅಂಧ ಮಕ್ಕಳ ಶಾಲೆಯಲ್ಲಿ ಬ್ರೈಲ್ ಲಿಪಿ ಕಲಿತ ನಂತರ ಅಥಣಿಯ ಶ್ರೀ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ ಕಾಲೇಜಿನಲ್ಲಿ ಬಿಎ ಮುಗಿಸಿದರು. ನಂತರ ಬಿ ಎಡ್ ಪದವಿಯನ್ನು ಸಹ ಪಡೆದಿದ್ದಾರೆ.

 ಮೆಮೊರಿಯಲ್ಲಿದೆ 10,000 ಕ್ಕೂ ಹೆಚ್ಚು ನಂಬರ್ ಗಳು

ಮೆಮೊರಿಯಲ್ಲಿದೆ 10,000 ಕ್ಕೂ ಹೆಚ್ಚು ನಂಬರ್ ಗಳು

ಇವರಿಗೆ ಒಮ್ಮೆ ಪರಿಚಯವಾಗಿ ಮೊಬೈಲ್ ನಂಬರ್ ಹೇಳಿದರೆ ಸಾಕು, ಮೆಮೊರಿಯಲ್ಲಿ ಹಾಗೆಯೇ ಕುಳಿತು ಬಿಡುತ್ತದೆ ನಂಬರ್. ಇದುವರೆಗೂ ಇವರ ಮೆಮೊರಿಯಲ್ಲಿರುವುದು ಬರೋಬ್ಬರಿ 10,000 ಕ್ಕೂ ಹೆಚ್ಚು ಮೊಬೈಲ್ ನಂಬರ್ ಗಳು.

ಕೇವಲ ನಂಬರ್ ಗಳೊಡನೆ ಆಟವಾಡುವ ಬಸವರಾಜ್ ಇನ್ನೊಂದು ವಿಶೇಷತೆ ಹೊಂದಿದ್ದಾರೆ. ಪ್ರತಿಯೊಬ್ಬ ರಾಷ್ಟ್ರೀಯ ಕ್ರಿಕೆಟ್ ಆಟಗಾರರು, ನಾಯಕರ ಹೆಸರು ಹಾಗೂ ಅವರು ಗಳಿಸಿದ್ದ ರನ್, ವಿಕೆಟ್ , ಕ್ಯಾಚ್ ಗಳನ್ನು ಸಲೀಸಾಗಿ ಹೇಳುತ್ತಾನೆ.

English summary
Blind Basavaraj Shankar Umrani (24) says statistics, phone numbers, cricket scors without any help. Basavaraj is lived in Athani Taluk, Belgaum district. Anyone salute to his memory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X