ಬಿಜೆಪಿಯವರಿಂದಲೇ ಡರ್ಟಿ ಪಾಲಿಟಿಕ್ಸ್: ಮೈಸೂರಿನಲ್ಲಿ ಸಿದ್ದರಾಮಯ್ಯ ಕಿಡಿ
ಮೈಸೂರು, ಸೆಪ್ಟೆಂಬರ್ 26: ಸಂಘ ಪರಿಹಾರದವರು ಹಾಗೂ ಬಿಜೆಪಿ ನಾಯಕರು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ''ನಾವು ಕೀಳು ಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿಯವರು ರಾಜಕಾರಣ ಮಾಡುವ ಉದ್ದೇಶದಿಂದ ಹೀಗೆ ಮಾತನಾಡುತ್ತಿದ್ದಾರೆ,''ಎಂದು ಕುಟುಕಿದರು.
2023ಕ್ಕೆ ವರುಣಾ ವಿಧಾನಸಭಾ ಕ್ಷೇತ್ರದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫರ್ಧೆ!
ಬಿಜೆಪಿ
ವಿರುದ್ಧ
ಗುಡುಗಿದ
ಸಿದ್ದರಾಮಯ್ಯ
''ಕಾಂಗ್ರೆಸ್ಸಿನವರು
ಹೋರಾಟ
ಮಾಡಿ
ದೇಶಕ್ಕೆ
ಸ್ವಾತಂತ್ರ್ಯ
ತಂದುಕೊಟ್ಟಿದ್ದಾರೆ.
ನಮಗೆ
ಡರ್ಟಿ
ಪಾಲಿಟಿಕ್ಸ್
ಬಗ್ಗೆ
ಗೊತ್ತಿಲ್ಲ.
ಅದು
ಬಿಜೆಪಿ
ಹಾಗೂ
ಸಂಘ-ಪರಿವಾರದಿಂದ
ಮಾತ್ರ
ಸಾಧ್ಯ.
ಮಹಾತ್ಮ
ಗಾಂಧಿಯನ್ನು
ಕೊಂದವರನ್ನು
ಇವರು
ಆರಾಧಿಸುತ್ತಾರೆ.
ಗಣೇಶನ
ಮೆರವಣಿಗೆಯಲ್ಲಿ
ಗೋಡ್ಸೆ
ಫೋಟೊ
ಇಟ್ಟುಕೊಂಡು
ಓಡಾಡುತ್ತಾರೆ.
ಇವರಿಗೆ
ಯಾವ
ನೈತಿಕತೆ
ಇದೆ?,"
ಎಂದು
ಪ್ರಶ್ನಿಸುವುದರ
ಮೂಲಕ
ಆಕ್ರೋಶವನ್ನು
ಹೊರಹಾಕಿದರು.
ರಾಹುಲ್ಗಾಂಧಿ ರಾಜ್ಯಕ್ಕೆ ಬಂದರೆ ಬಿಜೆಪಿಗೆ ಲಾಭ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಯಲ್ಲಿ ಬಿಜೆಪಿ ಸೋತ್ತಿಲ್ಲವೇ? ಪಂಜಾಬ್, ತೆಲಂಗಾಣ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳದಲ್ಲಿ ಬಿಜೆಪಿ ಸೋತ್ತಿಲ್ಲವೇ?,'' ಎಂದು ಟೀಕಿಸಿದರು. ರಾಜಕಾರಣದಲ್ಲಿ ನಾನು ಕರ್ಣನಿದ್ದಂತೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಭಂಡರು ಆ ರೀತಿ ಮಾತನಾಡುತ್ತಾರೆ. ಟೀಕೆಗೂ, ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ಉತ್ತರ ಕೊಡುತ್ತಾರೆ. ನಾಡಹಬ್ಬ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿ. ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಂದಿರುವುದು ಸ್ವಾಗತಾರ್ಹ. ಜನ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು,'' ಎಂದು ಹೇಳಿದರು.
ಸಿದ್ದರಾಮಯ್ಯ
ವಿರುದ್ಧ
ಸಿ.ಟಿ
ರವಿ
ವಾಗ್ದಾಳಿ
ಮಾಜಿ
ಸಿಎಂ
ಸಿದ್ದರಾಮಯ್ಯ
ವಿರುದ್ಧ
ಸಿಟಿ
ರವಿ
ಅವರು
ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ
ಕೈಗೆ
ಹ್ಯಾಂಡ್
ಗ್ಲೌಸ್
ಹಾಕಿ
ಅಕ್ರಮ
ಮಾಡಿದ್ದಾರೆ.
ಹೀಗಾಗಿ
ಅವರ
ಫಿಂಗರ್
ಪ್ರಿಂಟ್
ಕಾಣುತ್ತಾ
ಇಲ್ಲ.
ಅವರು
ಅಕ್ರಮ
ಮಾಡಿದ್ದು
ಸುಳ್ಳಾ?
ಸಿದ್ದರಾಮಯ್ಯ
ಉಡುವಷ್ಟು
ಪಂಚೆಯಷ್ಟೇ
ಕ್ಲೀನ್
ಇದ್ದಾರಾ?
ಎಂದು
ಸಿಟಿ
ರವಿ
ಪ್ರಶ್ನೆ
ಮಾಡುವ
ಮೂಲಕ
ವಾಗ್ದಾಳಿ
ನಡೆಸಿದ್ದರು.
ಕಾಂಗ್ರೆಸ್
ಮಾಡಿರುವ
ಭ್ರಷ್ಟಾಚಾರಕ್ಕೆ
ಇವರನ್ನೆಲ್ಲ
ಕೇವಲ
ಪರಪ್ಪನ
ಅಗ್ರಹಾರಕ್ಕೆ
ಹಾಕುವುದಲ್ಲ.
ಕಾಂಗ್ರೆಸ್
ನಾಯಕರು
ತಿಹಾರ್
ಜೈಲಲ್ಲೇ
ಇರಬೇಕು
ಎಂದು
ಸಿಟಿ
ರವಿ
ತಿರುಗೇಟು
ನೀಡಿದ್ದಾರೆ.