"ಬಿಜೆಪಿಯವರೇ ಯಡಿಯೂರಪ್ಪ ವಿರುದ್ಧ ಸೋಮವಾರ ಮತ ಹಾಕಬಹುದು"
ಮೈಸೂರು, ಜುಲೈ 28: "ಬಿಜೆಪಿಯವರೇ ಯಡಿಯೂರಪ್ಪ ವಿರುದ್ಧ ಸೋಮವಾರ ಮತ ಹಾಕಬಹುದು. ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ, ನಿರೀಕ್ಷೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮೈಸೂರಿನಲ್ಲಿ ಹೇಳಿದರು. ತಮ್ಮ ಮಗನ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದ ಅವರು, ಈ ರೀತಿ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯಗೆ ಅತೃಪ್ತ ಶಾಸಕರ ಫೋನ್ ಕರೆ: ಯಡಿಯೂರಪ್ಪಗೆ ಆತಂಕ
ಇನ್ನು ಅತೃಪ್ತ ಶಾಸಕರು ಕರೆ ಮಾಡಿದ್ದ ಬಗ್ಗೆ ಮಾತನಾಡಿದ ಅವರು, ಅತೃಪ್ತರು ಫೋನ್ ಮಾಡಿದ್ದರು ಎಂದು ಹೇಳಿದ್ದೇನೆ. ಪದೇಪದೇ ಈ ವಿಚಾರಾ ಪ್ರಸ್ತಾವ ಬೇಡ. ಕರೆ ಮಾಡಿಲ್ಲ ಎಂದಿರುವವರ ನನಗೆ ಫೋನ್ ಮಾಡಿಲ್ಲ, ಅಷ್ಟೇ. ಇನ್ನು 221 ಸದಸ್ಯ ಬಲದ ವಿಧಾನಸಭೆಯಲ್ಲಿ 111 ಸಂಖ್ಯಾ ಬಲ ಬಿಜೆಪಿ ಬಳಿ ಎಲ್ಲಿದೆ ಎಂದು ಅವರು ಪ್ರಶ್ನೆ ಮಾಡಿದರು.
ಇನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಬಗ್ಗೆ ಮುಂದೆ ನೋಡೋಣ. ಕೆಎಂಎಫ್ ನಲ್ಲಿ ಜೆಡಿಎಸ್, ಕಾಂಗ್ರೆಸ್ ಅಥವಾ ಬಿಜೆಪಿ ಅಂತ ಇಲ್ಲ. ಇನ್ನು ಬಿ ಫಾರಂ ಮೇಲೆ ಗೆದ್ದವರೇ ಹೋಗಿದ್ದಾರೆ. ಮುಂಬೈಯಲ್ಲಿ ಹೋಗಿ ಕೂತಿದ್ದಾರೆ. ಇವರನ್ನು ಏನು ಕೇಳಬಹುದು? "ನನ್ನ ಪ್ರಕಾರ ಬಿಜೆಪಿಯ ಯಡಿಯೂರಪ್ಪ ಅವರಿಗೆ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಇಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.