ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಬಾಯಿ ಕದಂ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 15: ಕನ್ನಡದ ಮುಂಚೂಣಿ ನಾಟಕ ಸಂಸ್ಥೆ ಮೈಸೂರು ರಂಗಾಯಣಕ್ಕೆ ಕೊನೆಗೂ ನಿರ್ದೇಶಕರ ನೇಮಕವಾಗಿದೆ. ಈ ಮೊದಲು ನಿರ್ದೇಶಕರಾಗಿದ್ದ ಜನಾರ್ದನ್ (ಜನ್ನಿ) ನಿವೃತ್ತಿಯಾದ ಬಳಿಕ ಬಹುದಿನಗಳಿಂದ ಖಾಲಿ ಇದ್ದ ನಿರ್ದೇಶಕರ ಸ್ಥಾನಕ್ಕೆ ಭಾಗೀರಥಿ ಬಾಯಿ ಕದಂ ಅವರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಆದೇಶ ಹೊರಡಿಸಿದ್ದಾರೆ.

ಅಲಮೇಲಮ್ಮನ ಶಾಪ ವಿಮುಕ್ತಿ, ಮೈಸೂರು ರಾಜ ಮನೆತನದಲ್ಲಿ ಸಂತಾನ ಭಾಗ್ಯಅಲಮೇಲಮ್ಮನ ಶಾಪ ವಿಮುಕ್ತಿ, ಮೈಸೂರು ರಾಜ ಮನೆತನದಲ್ಲಿ ಸಂತಾನ ಭಾಗ್ಯ

ಜನಾರ್ದನ್ ನಿವೃತ್ತಿಯಾದ ಬಳಿಕ ಖಾಯಂ ನಿರ್ದೇಶಕರು ನೇಮಕವಾಗಿರಲಿಲ್ಲ. ಇದರಿಂದ ರಂಗಾಯಣದ ಕಾರ್ಯಗಳು ಕುಂಠಿತವಾಗಿದ್ದವು. ನಿರ್ದೇಶಕರ ಸ್ಥಾನಕ್ಕೆ ಮಂಡ್ಯ ರಮೇಶ್, ಹಿರಿಯ ರಂಗಕರ್ಮಿ ಉಮೇಶ್ ಸೇರಿದಂತೆ ಅನೇಕರ ಹೆಸರುಗಳು ಕೇಳಿಬಂದಿದ್ದವು. ಆದರೆ ಭಾಗೀರಥಿ ಬಾಯಿ ಕದಂ ನೇಮಕವಾಗಿದ್ದಾರೆ. ಇದಲ್ಲದೆ ಶಿವಮೊಗ್ಗ ರಂಗಾಯಣಕ್ಕೆ ಡಾ.ಎಂ.ಗಣೇಶ್, ಕಲಬುರ್ಗಿ ರಂಗಾಯಣಕ್ಕೆ ಮಹೇಶ್.ವಿ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

Bhagirathi Bai Kadam: New director for Rangayana

ಇತ್ತೀಚೆಗೆ ತಾನೇ ಮೈಸೂರು ವಿಶ್ವ ವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿಯನ್ನಾಗಿ ಭಾರತಿಯವರನ್ನು ನೇಮಿಸಲಾಗಿದ್ದು, ಇದೀಗ ರಂಗಾಯಣಕ್ಕೂ ಮಹಿಳೆಯನ್ನೇ ನಿರ್ದೇಶಕರನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ ಮೈಸೂರಿನಲ್ಲಿ ಮಹಿಳೆಯರ ಹವಾ ಹೆಚ್ಚಿದೆ!

English summary
Kannada and culture Minister of Karnataka government, Umashri has appointed Bhagirathi Bai Kadam as Rangayana's new director. Rangayana is a famous kannada theatre institute, which's main branch is in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X