ತೇಜಸ್ವಿ ಸೂರ್ಯಗೆ ಟಿಕೆಟ್ ಸಿಗಲಿದೆ ಎಂದಿದ್ದ ಮೈಸೂರಿನ ಗುರುಗಳು ಯಾರು ಗೊತ್ತಾ ?
Recommended Video
ಮೈಸೂರು, ಮಾರ್ಚ್ 30 : ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ.ಅಭ್ಯರ್ಥಿ ತೇಜಸ್ವಿ ಸೂರ್ಯ ಇಂದು ಬೆಳಗಿನ ಜಾವವೇ ಮೈಸೂರಿನ ಅರ್ಜುನ ಅವಧೂತರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೈಸೂರಿನ ಸೋನಾರ್ ಬೀದಿಯಲ್ಲಿ ಇರುವ ಅರ್ಜುನ ಅವಧೂತರ ಗೃಹದಲ್ಲಿ ಇಂದು ಬೆಳಗಿನ ಜಾವದ ಬ್ರಾಹ್ಮೀ ಮುಹೂರ್ತದ ಪೂಜೆಗೆ ಆಗಮಿಸಿದ್ದ ತೇಜಸ್ವಿ ಸೂರ್ಯರವರು ಅವಧೂತರೊಂದಿಗೆ ಚುನಾವಣೆಯ ಕುರಿತು ಮಾತುಕತೆ ಸಹ ನಡೆಸಿದರು. ನಂತರ ಅವಧೂತರೊಂದಿಗೆ ಚಾಮುಂಡಿ ಬೆಟ್ಟದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು..
ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಟಿಕೆಟ್ ಹಂಚಿಕೆಗೆ ಮೊದಲೇ ತೇಜಸ್ವಿ ಸೂರ್ಯ, ಮೈಸೂರಿನ ಅರ್ಜುನ ಅವಧೂತ್ತರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದರು. ಆ ಸಂಧರ್ಭದಲ್ಲಿ ಅವಧೂತರು ನಿಮಗೆ ಟಿಕೆಟ್ ಸಿಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದರು. ಇದೇ ಹಿನ್ನೆಲೆ ಇಂದು ಸಹ ತೇಜಸ್ವಿಯವರು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಬಿಜೆಪಿ ಮುಖಂಡ ಜೋಗಿ ಮಂಜು, ಹರ್ಷ,ಸಂದೀಪ್ ಇತರರು ಜೊತೆಗಿದ್ದರು.