ದಸರಾಗೆ ಬೆಂಗಳೂರು– ಮೈಸೂರು ನಡುವೆ ವಿಶೇಷ ರೈಲು ಸಂಚಾರ
ಮೈಸೂರು, ಅಕ್ಟೋಬರ್.07 : ನಾಡಹಬ್ಬ ದಸರಾ ಅಂಗವಾಗಿ ಜನದಟ್ಟಣೆ ತಪ್ಪಿಸಲು ಅಕ್ಟೋಬರ್ 9ರಿಂದ 22ರ ವರೆಗೆ ಬೆಂಗಳೂರು- ಮೈಸೂರು ನಡುವೆ ವಿಶೇಷ ರೈಲು ಸಂಚರಿಸಲಿದೆ.
'ಜನಸಾಧಾರಣ ವಿಶೇಷ ರೈಲ'ನ್ನು ನೈರುತ್ಯ ರೈಲ್ವೆ ಪರಿಚಯಿಸಿದೆ. ಬೆಂಗಳೂರು ನಗರ-ಮೈಸೂರು ವಿಶೇಷ ಎಕ್ಸ್ಪ್ರೆಸ್ (06557) ರೈಲು ಅ.9ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8:45ಕ್ಕೆ ಬೆಂಗಳೂರು ನಗರದಿಂದ ಹೊರಟು ಬೆಳಗ್ಗೆ 11:35ಕ್ಕೆ ಮೈಸೂರು ತಲುಪಲಿದೆ.
ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆ
ಅದೇ ರೀತಿ ಅ.10ರಿಂದ 22ರವರೆಗೆ ಮೈಸೂರಿನಿಂದ ಮಧ್ಯಾಹ್ನ 12:50ಕ್ಕೆ ಹೊರಡುವ ರೈಲು (06558) ಮಧ್ಯಾಹ್ನ 3:45ಕ್ಕೆ ಬೆಂಗಳೂರು ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಒಟ್ಟು 13 ಟ್ರಿಪ್ ರೈಲು ಸಂಚರಿಸಲಿದೆ.
ಶಿವಮೊಗ್ಗ ಟೌನ್-ಶ್ರವಣಬೆಳಗೊಳ ವಾರದಲ್ಲಿ ಮೂರು ದಿನ ಸಂಚಾರದ ವಿಶೇಷ ಎಕ್ಸ್ಪ್ರೆಸ್ (06223) ರೈಲು ಅ.9ರಿಂದ 25ರವರೆಗೆ ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಬೆಳಗ್ಗೆ 6:25ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 11:25ಕ್ಕೆ ಶ್ರವಣಬೆಳಗೊಳಕ್ಕೆ ತಲುಪಲಿದೆ.
ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು
ಅ.9ರಿಂದ 25ರವರೆಗೆ ಶ್ರವಣಬೆಳಗೊಳ-ಶಿವಮೊಗ್ಗ ಟೌನ್ ವಿಶೇಷ ಎಕ್ಸ್ಪ್ರೆಸ್ (06224) ರೈಲು ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಮಧ್ಯಾಹ್ನ 1:35ಕ್ಕೆ ಶ್ರವಣಬೆಳಗೊಳದಿಂದ ಪ್ರಯಾಣ ಬೆಳೆಸಿ ಸಂಜೆ 7:10ಕ್ಕೆ ಶಿವಮೊಗ್ಗ ಟೌನ್ ಸೇರಲಿದೆ.
ನೈಋತ್ಯ ರೈಲ್ವೆ: 116 ರೈಲುಗಳ ಪರಿಷ್ಕೃತ ವೇಳಾಪಟ್ಟಿ ಸಿದ್ಧ
ನೈಋತ್ಯ ರೈಲ್ವೆ ಕೆಲವು ಹಾಲ್ಟ್ ಸ್ಟೇಶನ್ ಗಳನ್ನು 3 ತಿಂಗಳ ಅವಧಿಗೆ ಬಂದ್ ಮಾಡಿದೆ. ಆದಿಚುಂಚನಗಿರಿ, ಸಿದ್ದಾಪುರ, ಪಾಲಹಳ್ಳಿ, ದೊಡ್ಡನಟ್ಟ, ಗಣ್ಣಘಟ್ಟ, ಗೊಟ್ಟಿಹಳ್ಳಿ, ಗಿಡ್ನಹಳ್ಳಿ ಹಾಲ್ಟ್ ನಿಲ್ದಾಣಗಳನ್ನು ಅ.7ರಿಂದ ಮೂರು ತಿಂಗಳ ಅವಧಿಗೆ ಬಂದ್ ಮಾಡಲಾಗುವುದು.
ಮೈಸೂರು ದಸರಾ ಉತ್ಸವವನ್ನು ಮೊಬೈಲ್ನಿಂದಲೇ ಲೈವ್ ಆಗಿ ನೋಡಿ
ಯಶವಂತಪುರ-ಮೈಸೂರು ಪ್ಯಾಸೆಂಜರ್ (56215) ರೈಲು ಆದಿಚುಂಚನಗಿರಿ ಹಾಗೂ ಸಿದ್ದಾಪುರ, ಬೆಂಗಳೂರು ನಗರ-ಕೋಲಾರ ಪ್ಯಾಸೆಂಜರ್ (76551) ರೈಲು ದೊಡ್ಡನಟ್ಟ, ಜನ್ನಘಟ್ಟ, ಗಿಡ್ನಳ್ಳಿ ನಿಲ್ದಾಣದಲ್ಲಿ ಚನ್ನಪಟ್ಟಣ-ಕೋಲಾರ (76525) ದೊಡ್ಡನಟ್ಟ, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಗಿಡ್ನಳ್ಳಿ ನಿಲ್ದಾಣದಲ್ಲಿ 3 ತಿಂಗಳು ನಿಲುಗಡೆಗೊಳ್ಳುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.