ಮೈಸೂರಿನಲ್ಲಿ ಆಟೋ ಡಿಕ್ಕಿ ಜಗಳಕ್ಕೆ ನಡೆಯಿತು ಎರಡು ಕೊಲೆ
ಮೈಸೂರು, ಮೇ 25: ಆಟೋಗಳೆರಡು ಪರಸ್ಪರ ಡಿಕ್ಕಿ ಹೊಡೆದಿದ್ದು, ಆ ಕಾರಣಕ್ಕೇ ಆರಂಭವಾದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯ ಕಂಡ ಘಟನೆ ಇಲ್ಲಿಗೆ ಸಮೀಪದ ಕೋಟೆ ಹುಂಡಿ ಬಳಿ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ, ಲಗೇಜ್ ಆಟೋ ಹಾಗೂ ಪ್ಯಾಸೆಂಜರ್ ಆಟೋ ಎದುರು ಬದುರಾಗಿ ಬಂದು ಡಿಕ್ಕಿ ಹೊಡೆದಿವೆ. ಈ ಸಮಯ ಇಬ್ಬರು ಆಟೋ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಈ ಗಲಾಟೆ ಹೊಡೆದಾಟದ ಹಂತಕ್ಕೆ ಹೋಗಿ ಸಾವಿನಲ್ಲಿ ಅಂತ್ಯ ಕಂಡಿದೆ.
ಪ್ಯಾಸೆಂಜರ್ ಆಟೋ ಚಾಲಕ ಯೋಗೇಶ್ ಎಂಬಾತ, ಲಗೇಜ್ ಆಟೋ ಚಾಲಕ ಹಾಗೂ ಆ ಆಟೋದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾನೆ.
ವಿರಾಜಪೇಟೆ; ಅಮ್ಮನನ್ನು ಬೈದಿದ್ದಕ್ಕೆ ಅಣ್ಣನಿಗೆ ಗುಂಡಿಟ್ಟ ತಮ್ಮ
ಯಡಹಳ್ಳಿ ನಿವಾಸಿಗಳಾದ ಆಟೋ ಚಾಲಕ ಟಿ.ಮಂಜುನಾಥ್ (33) ಹಾಗೂ ಟಿವಿಎಸ್ ಕಾರ್ಖಾನೆ ನೌಕರ ಆರ್.ಮಂಜುನಾಥ್ (32) ಈ ಘಟನೆಯಲ್ಲಿ ಕೊಲೆಯಾಗಿದ್ದಾರೆ. ಆರೋಪಿ ಯೋಗೇಶ್ (23) ಪೊಲೀಸರಿಗೆ ಶರಣಾಗಿದ್ದಾನೆ. ಈ ಕೊಲೆಗಳ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.