ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಆಟೋ ಡಿಕ್ಕಿ ಜಗಳಕ್ಕೆ ನಡೆಯಿತು ಎರಡು ಕೊಲೆ

|
Google Oneindia Kannada News

ಮೈಸೂರು, ಮೇ 25: ಆಟೋಗಳೆರಡು ಪರಸ್ಪರ ಡಿಕ್ಕಿ ಹೊಡೆದಿದ್ದು, ಆ ಕಾರಣಕ್ಕೇ ಆರಂಭವಾದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯ ಕಂಡ ಘಟನೆ ಇಲ್ಲಿಗೆ ಸಮೀಪದ ಕೋಟೆ ಹುಂಡಿ ಬಳಿ ನಿನ್ನೆ ರಾತ್ರಿ ನಡೆದಿದೆ.

ನಿನ್ನೆ ರಾತ್ರಿ, ಲಗೇಜ್ ಆಟೋ ಹಾಗೂ ಪ್ಯಾಸೆಂಜರ್ ಆಟೋ ಎದುರು ಬದುರಾಗಿ ಬಂದು ಡಿಕ್ಕಿ ಹೊಡೆದಿವೆ. ಈ ಸಮಯ ಇಬ್ಬರು ಆಟೋ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಈ ಗಲಾಟೆ ಹೊಡೆದಾಟದ ಹಂತಕ್ಕೆ ಹೋಗಿ ಸಾವಿನಲ್ಲಿ ಅಂತ್ಯ ಕಂಡಿದೆ.

ಪ್ಯಾಸೆಂಜರ್ ಆಟೋ ಚಾಲಕ ಯೋಗೇಶ್ ಎಂಬಾತ, ಲಗೇಜ್ ಆಟೋ ಚಾಲಕ ಹಾಗೂ ಆ ಆಟೋದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾನೆ.

 ವಿರಾಜಪೇಟೆ; ಅಮ್ಮನನ್ನು ಬೈದಿದ್ದಕ್ಕೆ ಅಣ್ಣನಿಗೆ ಗುಂಡಿಟ್ಟ ತಮ್ಮ ವಿರಾಜಪೇಟೆ; ಅಮ್ಮನನ್ನು ಬೈದಿದ್ದಕ್ಕೆ ಅಣ್ಣನಿಗೆ ಗುಂಡಿಟ್ಟ ತಮ್ಮ

Auto Drivers Quarrel Leads To Murder In Mysuru

ಯಡಹಳ್ಳಿ ನಿವಾಸಿಗಳಾದ ಆಟೋ ಚಾಲಕ ಟಿ.ಮಂಜುನಾಥ್ (33) ಹಾಗೂ ಟಿವಿಎಸ್ ಕಾರ್ಖಾನೆ ನೌಕರ ಆರ್.ಮಂಜುನಾಥ್ (32) ಈ ಘಟನೆಯಲ್ಲಿ ಕೊಲೆಯಾಗಿದ್ದಾರೆ. ಆರೋಪಿ ಯೋಗೇಶ್ (23) ಪೊಲೀಸರಿಗೆ ಶರಣಾಗಿದ್ದಾನೆ. ಈ ಕೊಲೆಗಳ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

English summary
Auto drivers quarrel leads to two murder in mysuru. Auto driver yogesh stabbed two in kote hundi of mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X