ಆಷಾಢ ಶುಕ್ರವಾರ, ಚಾಮುಂಡಿ ಬೆಟ್ಟಕ್ಕೆ ಹೋಗಲು ಸೂಚನೆಗಳು
ಮೈಸೂರು, ಜುಲೈ 16 : ಆಷಾಢ ಮಾಸದ ಮೊದಲ ಶುಕ್ರವಾರದ ಪೂಜೆಗೆ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವುದರಿಂದ ಮೈಸೂರು ನಗರ ಪೊಲೀಸರು ವಾಹನ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.
ಜುಲೈ
17,
24,
31
ಮತ್ತು
ಆಗಸ್ಟ್
5ರಂದು
ಆಷಾಢ
ಮಾಸದ
ಪೂಜೆಗಳು
ಚಾಮುಂಡಿ
ಬೆಟ್ಟದಲ್ಲಿ
ನಡೆಯಲಿವೆ.
ಆಗಸ್ಟ್
7ರಂದು
ಚಾಮುಂಡೇಶ್ವರಿ
ಅಮ್ಮನವರ
ವರ್ಧಂತಿ
ನಡೆಯಲಿದ್ದು,
ಎಲ್ಲಾ
ದಿನಗಳಿಗೂ
ಅನ್ವಯವಾಗುವಂತೆ
ಸಂಚಾರ
ಮಾರ್ಗ
ಬದಲಾವಣೆ
ಮಾಡಲಾಗಿದೆ.
[ಚಾಮುಂಡಿ
ಬೆಟ್ಟದಲ್ಲಿ
ಜು.17
ರಿಂದ
ಆಷಾಢ
ಪೂಜೆ]
ಆಷಾಢ ಮಾಸದಲ್ಲಿ ಶಕ್ತಿ ದೇವತೆಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಆಷಾಢದ ಶುಕ್ರವಾರದಂದು ಲಕ್ಷಾಂತರ ಜನರು ಬೆಟ್ಟಕ್ಕೆ ಆಗಮಿಸುತ್ತಾರೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಣೆ ಮಾಡಲು 25 ಸಾವಿರ ಲಡ್ಡು ಮತ್ತು 2 ಸಾವಿರ ಚಂಪಾಕಲಿಯನ್ನು ಸಿದ್ಧಗೊಳಿಸಲಾಗಿದೆ. [ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]
ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಬದಲಾವಣೆಯ ವಿವರಗಳು ಕೆಳಗಿನಂತಿವೆ.
* ಬೆಟ್ಟಕ್ಕೆ ಹೋಗುವ ಭಕ್ತಾದಿಗಳು ಲಲಿತ್ ಮಹಲ್ ಹೆಲಿಪ್ಯಾಡ್ನಲ್ಲಿ ವಾಹನ ನಿಲುಗಡೆ ಮಾಡಿ, ದೇವಾಲಯದ ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುವ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಬೆಟ್ಟಕ್ಕೆ ಹೋಗಬೇಕು. ಈ ಬಸ್ ಸೌಲಭ್ಯ ಉಚಿತವಾಗಿದ್ದು ಮುಂಜಾನೆ 2ಗಂಟೆಯಿಂದ ಬಸ್ ಸಂಚರಿಸಲಿವೆ.
* ದೇವಸ್ಥಾನದಲ್ಲಿ ಉಚಿತ ಪ್ರಸಾದ ವಿನಿಯೋಗ ಮಾಡುವ ವಾಹನಗಳಿಗೆ ಚಾಮುಂಡಿ ಬೆಟ್ಟದಲ್ಲಿ ಬಸ್ ನಿಲ್ದಾಣದ ಪಕ್ಕ ನಿರ್ಮಿಸುತ್ತಿರುವ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳು ಪೊಲೀಸರು ನೀಡುವ ಪಾಸ್ಅನ್ನು ಕಡ್ಡಾಯವಾಗಿ ಪಡೆದಿರಬೇಕು. ನಿಗದಿತ ಸಮಯದಲ್ಲಿ ಮಾತ್ರ ಪ್ರಸಾದ ವಿನಿಯೋಗ ಮಾಡಬೇಕು.
* ದೇವಾಲಯಕ್ಕೆ ಬರುವ ವಿ.ವಿ.ವಿ.ಪಿ, ವಿ.ಐ.ಪಿ, ಮಾಧ್ಯಮದ ವಾಹನಗಳಿಗೆ ಪ್ರತ್ಯೇಕ ಪಾಸುಗಳನ್ನು ನೀಡಲಾಗುತ್ತಿದ್ದು, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪಾಸು ಲಭ್ಯವಿದೆ. ಪಾಸು ಪಡೆದ ವಾಹನಗಳಿಗೆ ಬೆಟ್ಟಕ್ಕೆ ಹೋಗಲು ಅವಕಾಶವಿದ್ದು, ನಿಗದಿಪಡಿಸಿದ ಜಾಗದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು.
* ಪ್ರತಿ ಶುಕ್ರವಾರದ ಹಿಂದಿನ ದಿನ ಅಂದರೆ ಗುರುವಾರ ರಾತ್ರಿ 10 ಗಂಟೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಯಾವುದೇ ವಾಹನ ಪ್ರವೇಶಿಸುವಂತಿಲ್ಲ.
* ಚಾಮುಂಡಿ ಬೆಟ್ಟದ ನಿವಾಸಿಗಳು ತಮ್ಮ ವಾಹನಕ್ಕೆ ಅನುಮತಿ ಪತ್ರ ಪಡೆಯಲು ವಾಹನದ ಡಿಎಲ್, ಮತದಾರರ ಗುರುತಿನ ಚೀಟಿ ಜೆರಾಕ್ಸ್ ಪ್ರತಿಯನ್ನು ಸಿದ್ಧಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿ ಅನುಮತಿ ಪತ್ರ ನೀಡಬೇಕು.
* ದೇವಾಲಯಕ್ಕೆ ಬರುವ ಅಂಗವಿಕಲರಿಗೆ, ವೃದ್ಧರಿಗೆ ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಮಹಿಷಾಸುದ ಪ್ರತಿಮೆಯಿಂದ ದೇವಾಲಯದ ತನಕ ಪ್ರಯಾಣಿಸಬಹುದಾಗಿದೆ.
* ಉತ್ತನಹಳ್ಳಿ ಕಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಮತ್ತು ಹೋಗುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.