ಚೆನ್ನೈ-ಮೈಸೂರು ಶತಾಬ್ಧಿ ರೈಲಿಗೆ ಅನುಭೂತಿ ಕೋಚ್ ಸೇವೆ
ಬೆಂಗಳೂರು, ಜನವರಿ 12: ರೈಲಿನಲ್ಲಿ ವಿಮಾನ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲು ರೈಲ್ವೆ ಇಲಾಖೆ ಸಜ್ಜಾಗಿದೆ. ಚೆನ್ನೈನಿಂದ ಶುಕ್ರವಾರ ಹೊರಡುವ ಶತಾಬ್ಧಿ ರೈಲಿನಲ್ಲಿ ಅನುಭೂತಿ ಬೋಗಿಗಳು ಸೇರ್ಪಡೆಯಾಗಲಿದ್ದು, ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಕೊಡುಗೆ ನೀಡುತ್ತಿದೆ.
ಚೆನ್ನೈ ಸೆಂಟ್ರಲ್- ಮೈಸೂರು ಶತಾಬ್ಧಿ ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ ಪೊಂಗಲ್- ಸಂಕ್ರಾಂತಿ ಕೊಡುಗೆಗಾಗಿ ಹಲವು ಲಕ್ಸುರಿ ಸೌಲಭ್ಯ ಒದಗಿಸುವ ಅನುಭೂತಿ ಕೋಚ್ ಸೇವೆ ಆರಂಭಿಸುತ್ತಿದೆ.
ನೈಋತ್ಯ ರೈಲ್ವೆ ವಲಯ ಅನಭೂತಿ ಕೋಚ್ ಗಳನ್ನು ಪರಿಚಯಿಸುತ್ತಿದ್ದು, ಅನುಭೂತಿ ಕೋಚಿಂಗ್ ಗಳ ಬುಕಿಂಗ್ ಗಾಗಿ ಪ್ರಯಾಣಿಕರು ರೈಲು ಸಂಖ್ಯೆ 12007/12008 ರ ಬದಲಾಗಿ 22007 ಹಾಗೂ 22008 ಸಂಖ್ಯೆಯನ್ನು ಟಿಕೇಟ್ ರಿಸರ್ವೇಷನ್ ವೇಳೆ ಬಳಸಲು ಕೋರಲಾಗಿದೆ.
ಸಂಕ್ರಾಂತಿ, ಗಣರಾಜ್ಯೋತ್ಸವದಂದು ವಿಶೇಷ ರೈಲು ಸಂಚಾರ
ಈ ಹೊಸ ಬಗೆಯ ಅನುಭೂತಿ ಕೋಚ್ ಗಳು ಕುಳಿತುಕೊಳ್ಳುವ ಆಸನ ಹಾಗೂ ಒಳಾಂಗಣದ ವಿನ್ಯಾಸಲ್ಲಿ ಬದಲಾವಣೆ ಮಾಡಿದ್ದು, ಶೌಚಾಲಯಗಳ ಬಳಕೆಯನ್ನು ಪಾಶ್ಚಿಮಾತ್ಯ ಶೈಲಿಯಲ್ಲಿ ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. ವೃದ್ಧರು ಹಾಗೂ ಮಹಿಳೆಯರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಈ ಸೌಲಭ್ಯವು ಕೇವಲ ಅನುಭೂತಿ ಕೋಚ್ ಗಳನ್ನು ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ಮಾತ್ರ ಲಭ್ಯವಾಗಲಿದೆ. ಪ್ರಯಾಣಿಕರು ರೈಲ್ವೆ ಟಿಕೇಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸುವಾಗ ಬದಲಾದ ರೈಲುಗಳ ಸಂಖ್ಯೆಯನ್ನು ಆಧರಿಸಿ ಟಿಕೇಟ್ ಬುಕಿಂಗ್ ಮಾಡಿಸಲು ನೈಋತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.