'ಯಾರಿಂದಲೂ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ'
Recommended Video
ಆನಂದ್
ಸಿಂಗ್
ರಾಜೀನಾಮೆ
ಬಗ್ಗೆ
ಜಿ.ಟಿ.ದೇವೇಗೌಡ
ಹೀಗೆ
ಹೇಳಿದ್ದೇಕೆ?
|
Oneindia
Kannada
ಮೈಸೂರು, ಜುಲೈ 1: ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರು ರಾಜೀನಾಮೆ ಕೊಟ್ಟರೂ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.
ಸಮಸ್ಯೆ ಹೇಳಿ, ಧಿಕ್ಕಾರ ಕೂಗಬೇಡಿ: ಸಚಿವ ಜಿ.ಟಿ.ದೇವೇಗೌಡ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಆನಂದಸಿಂಗ್ ಗೆ ಅಸಮಾಧಾನ ಇದ್ದರೆ ಉಪ ಸಮಿತಿ ಜೊತೆ ಚರ್ಚೆ ನಡೆಸುತ್ತಾರೆ. ಜೆಡಿಎಸ್ ನ ಯಾವೊಬ್ಬ ಶಾಸಕರೂ ರಾಜೀನಾಮೆ ನೀಡುವುದಿಲ್ಲ ಎಂದರು.
ಜೆಡಿಎಸ್ ಮಾಜಿ ಅಧ್ಯಕ್ಷ ಎಚ್. ವಿಶ್ವನಾಥ್ ಎಲ್ಲಿಯೂ ಹೋಗಿಲ್ಲ. ವಿಶ್ವನಾಥ್ ರಾಜೀನಾಮೆ ಕೊಡುತ್ತಾರೆ ಎನ್ನುವುದು ಕೇವಲ ಊಹಾಪೋಹ. ಜೆಡಿಎಸ್ ನಲ್ಲಿ ವಿಶ್ವನಾಥ್ ಅತೃಪ್ತರಾಗಿಲ್ಲ. ಇನ್ನು ಆಪರೇಷನ್ ಕಮಲಕ್ಕೆ ಮೋದಿ, ಅಮಿತ್ ಷಾ ಕೈ ಹಾಕುವುದಿಲ್ಲ. ಅವರು ಕೇಂದ್ರ ಬಜೆಟ್ ಮಂಡನೆ ವಿಚಾರದಲ್ಲಿ ಮಗ್ನರಾಗಿದ್ದಾರೆ ಎಂದರು.
Comments
anand singh gt devegowda resignation h vishwanath mysuru ಜಿ ಟಿ ದೇವೇಗೌಡ ಆನಂದ್ ಸಿಂಗ್ ಎಚ್ ವಿಶ್ವನಾಥ್ ಮೈಸೂರು
English summary
Minister G T DeveGowda reacts about Anand Singh resignation. He said that Our JDS- congress coalition government will work five years completely. Anand resignation will not effect on our government.
Story first published: Monday, July 1, 2019, 15:46 [IST]