ಕನ್ನಡ ಚಿತ್ರರಂಗ ಸದಾ ಕೊಡಗಿನ ಜೊತೆ ಇರುತ್ತೆ; ನಟ ಪುನೀತ್
ಮೈಸೂರು, ಜೂನ್ 14: ಮೈಸೂರಿನ ರಾಮಕೃಷ್ಣ ನಗರದಲ್ಲಿನ ಪರಮಹಂಸ ಉದ್ಯಾನವನದಲ್ಲಿ ನಿರ್ಮಾಣವಾಗಿರುವ ಔಟ್ ಡೋರ್ ಜಿಮ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿದರು.
ತಾಳಿ ಕಟ್ಟಿದ ತಕ್ಷಣ ಪುನೀತ್ ದರ್ಶನಕ್ಕೆ ಬಂದ ದಂಪತಿ
ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ಸುಸಜ್ಜಿತ ವ್ಯಾಯಾಮ ಶಾಖೆಯೊಂದಿಗೆ ಮೈಸೂರಿನಲ್ಲಿ ಉದ್ಯಾನವನ ನಿರ್ಮಾಣವಾಗಿದೆ. ಮನುಷ್ಯರಿಗೆ ವ್ಯಾಯಾಮ ಅವಶ್ಯಕ ಎಂದು ಹೇಳಿ, ಅಂತರ ರಾಷ್ಟ್ರೀಯ ಯೋಗ ದಿನಕ್ಕೆ ಸಜ್ಜಾಗುತ್ತಿರುವ ಮೈಸೂರಿಗರಿಗೆ ಆಲ್ ದಿ ಬೆಸ್ಟ್ ಎಂದು ಶುಭ ಕೋರಿದರು. ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗ ಸದಾ ಕೊಡಗಿನ ಜೊತೆ ಇರುತ್ತೆ ಎಂದರು.
ಇದೇ ಸಂದರ್ಭ, ಯಶ್ ಜೊತೆ ನಟಿಸುವ ವಿಚಾರಕ್ಕೆ, ಕಾಲ ಕೂಡಿ ಬಂದಾಗ ಯಶ್, ನಾನು ಒಂದೇ ಸಿನಿಮಾದಲ್ಲಿ ನಟಿಸುತ್ತೇವೆ. ಇಬ್ಬರೂ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಜೊತೆಗೆ ಭೇಟಿಯಾಗಿ ಊಟ ಮಾಡಿದ್ದೇವೆ ಅಷ್ಟೆ ಎಂದರು. ಪುನೀತ್ ಗೆ ಗುಲಾಬಿ ಹೂವಿನ ಬೃಹತ್ ಹಾರ ಹಾಕಿ ಅಭಿಮಾನಿಗಳು ಸಂತೋಷಪಟ್ಟರು.