ಹಳೆಯ ದ್ವೇಷಕ್ಕೆ ಯುವಕನ ಕೊಲೆ:ಮೈಸೂರಿನಲ್ಲೂ ಹೆಚ್ಚಾಯ್ತು ರೌಡಿಸಂ
ಮೈಸೂರು, ಫೆಬ್ರವರಿ 13: ರಾಘವೇಂದ್ರ ನಗರದ ನಿವಾಸಿ ಚಿನ್ನಸ್ವಾಮಿ ಅಲಿಯಾಸ್ ಮ್ಯೆಕಾನಿಕ್ ಬಾಬು (26) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಕೋಟ ಡಬಲ್ ಮರ್ಡರ್: ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಜೈಲುಪಾಲು
ಬಡಾವಣೆಯ ಸ್ಮಶಾನದ ಬಳಿ ಸ್ನೇಹಿತರ ಗುಂಪಿನ ನಡುವೆ ಗಲಾಟೆ ನಡೆದಿದ್ದು, ವಿಪರೀತ ಮದ್ಯ ಸೇವಿಸಿದ್ದ ಗುಂಪೊಂದು ಇವರಿಗೆ ಮೂರು ಬಾರಿ ಚಾಕುವಿನಿಂದ ಇರಿದು, ಬಾಟಲಿಯಿಂದ ತಲೆಗೆ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಚಿನ್ನಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ಷುಲ್ಲಕ ಜಗಳ, ಪತ್ನಿ, ನವಜಾತ ಶಿಶುವಿಗೆ ಬೆಂಕಿ ಇಟ್ಟ ಪತಿ
ಹಳೆಯ ದ್ವೇಷವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕ್ಷುಲ್ಲಕ ಕಾರಣಕ್ಕೆ ಪವನ್, ಪ್ರೇಮ್ ಸಾಗರ್, ಪ್ರಜ್ವಲ್ ಹಾಗೂ ಇತರರ ನಡುವೆ ಮತ್ತು ಮ್ಯೆಕಾನಿಕ್ ಬಾಬು ಗೆ ಗಲಾಟೆಯಾಗಿತ್ತು.
ಆರೋಪಿಗಳನ್ನು ಹುಡುಕುತ್ತಿದ್ದೇವೆ. ಈ ಸಂಬಂಧ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಎಂಸಿ ಶಾಸಕನ ಹತ್ಯೆ; ಇಬ್ಬರ ಬಂಧನ, ಪೊಲೀಸ್ ಅಧಿಕಾರಿ ಅಮಾನತು
15 ದಿನಗಳ ಅಂತರದಲ್ಲಿ ನಡೆದ 2ನೇ ಹತ್ಯೆ ಇದಾಗಿದೆ. ಜ. 28ರಂದು ಮುನೇಶ್ವರ ನಗರ ನಿವಾಸಿ ಆಟೋ ಚಾಲಕ ಮನು ಅಲಿಯಾಸ್ ಜಾನಿ (29) ಎಂಬುವವರನ್ನು ಅಗ್ನಿಶಾಮಕ ಠಾಣೆ ಸಮೀಪದ ರೈಲು ಮೇಲ್ಸೇತುವೆ ಬಳಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ನಂತರ, ನಗರದ ವರ್ತಕರೊಬ್ಬರನ್ನು ಬನ್ನೂರಿನ ಬಳಿ ಕೊಲೆ ಮಾಡಲಾಗಿತ್ತು.